ಮೇ.31 ಪಾಲ್ತಾಡಿ ನಡುಕೂಟೇಲುನಲ್ಲಿ ವಿಶ್ವಲೀಲಾ ಗೃಹಪ್ರವೇಶ

0

ಪುತ್ತೂರು: ಪಾಲ್ತಾಡಿ ಗ್ರಾಮದ ನಡುಕೂಟೇಲು ಎಂಬಲ್ಲಿ ಲೀಲಾವತಿ ವಿಶ್ವನಾಥ ರೈ ಮನೆಯವರು ನಿರ್ಮಿಸಿದ ವಿಶ್ವಲೀಲಾ ನೂತನ ಗೃಹಪ್ರವೇಶವು ಮೇ.31ರಂದು ನಡೆಯಲಿದೆ.


ಬೆಳಿಗ್ಗೆ ಗೃಹ ಪ್ರವೇಶ, ಗಣಹೋಮ, ಮಧ್ಯಾಹ್ನ ಸತ್ಯನಾರಾಯಣ ಪೂಜೆ, ಅಪಾರಾಹ್ನ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡವಿಕೆಯೊಂದಿಗೆ `ಶ್ರೀರಾಮ ದರ್ಶನ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಪ್ರಶಾಂತ್ ರೈ ಪುತ್ತೂರು, ಚೆಂಡೆಯಲ್ಲಿ ದಯಾನಂದ ಶೆಟ್ಟಿಗಾರ್ ಮಿಜಾರು, ಮದ್ದಳೆಯಲ್ಲಿ ಲವ ಕುಮಾರ್ ಐಲ, ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಪ್ರಸಾದ್ ಸವಣೂರು ಭಾಗವಹಿಸಲಿದ್ದಾರೆ. ರಾತ್ರಿ ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ನಡೆಯಲಿದೆ ಎಂದು ಲೀಲಾವತಿ, ವಿಶ್ವನಾಥ ರೈ, ದೀಪಾ ಪ್ರವೀಣ್ ರೈಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here