ಶಾಂತಿಗೋಡು ಕುಸಿದ ಧರೆ – ಅಪಾಯಕ್ಕೆ ಸಿಲುಕಿದ ಎರಡು ಮನೆ : ಮನೆ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

0


ಪುತ್ತೂರು: ಭಾರಿ ಮಳೆಗೆ ಶಾಂತಿಗೋಡು ಕೈಂದಾಡಿಯಲ್ಲಿ ಮೇ 30ರ ರಾತ್ರಿ ಮನೆ ಪಕ್ಕದ ಧರೆಯೊಂದು ಕುಸಿದು ಎರಡು ಮನೆಗಳು ಅಪಾಯದ ಅಂಚಿನಲ್ಲಿದ್ದು, ಮನೆ ಮಂದಿಯನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.


ಶಾಂತಿಗೋಡು ಕೈಂದಾಡಿ ಜತ್ತಪ್ಪ ಗೌಡರ ಎರಡು ವರ್ಷ ಹಿಂದೆ ನಿರ್ಮಾಣಗೊಂಡ ಹೊಸ ಮನೆಯೊಂದರ ಪಕ್ಕದಲ್ಲಿ ಧರೆಯೊಂದು ಕುಸಿದು ಮನೆ ಅಪಾಯದ ಸ್ಥಿತಿಯಲ್ಲಿದೆ. ಮನೆಯೊಳಗಿನ ಸಾಮಾಗ್ರಿಗಳನ್ನು ಹೊರಗೆ ಸಿಟೌಟ್‌ನಲ್ಲಿ ಇರಿಸಲಾಗಿದೆ. ಜೊತೆಗೆ ಮನೆ ಮಂದಿಯನ್ನು ಸ್ಥಳೀಯ ಮನೆಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಇದೇ ಭಾಗದಲ್ಲಿ ಬಾಬು ಗೌಡ ಅವರ ಮನೆ ಮುಂದಿನ ಧರೆಯೊಂದು ಕುಸಿದು ಮನೆ ಅಪಾಯಕ್ಕೆಗೊಳಗಾಗಿದೆ.

LEAVE A REPLY

Please enter your comment!
Please enter your name here