
ಪುತ್ತೂರು: ಭಾರಿ ಮಳೆಗೆ ದಾರಂದಕುಕ್ಕು ಕೊಡಪಟ್ಯದಲ್ಲಿ ಮನೆಯೊಂದರ ಮೇಲೆ ಧರೆ ಕುಸಿದು ಮನೆ ಹಾನಿಗೊಂಡ ಘಟನೆ ಮೇ.30ರ ತಡ ರಾತ್ರಿ ನಡೆದಿದೆ.

ಕೊಡಪಟ್ಯ ನಿವಾಸಿ ಕೃಷ್ಣಯ್ಯ ಆಚಾರ್ಯ ಅವರ ಮನೆ ಮೇಲೆ ಧರೆ ಕುಸಿದಿದೆ. ರಾತ್ರಿ ಕುಸಿಯುವ ಭೀತಿಯನ್ನು ಗಮನಿಸಿ ಸ್ಥಳೀಯರ ಸಲಹೆಯಂತೆ ಮನೆ ಮಂದಿ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದರು. ರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಧರೆ ಕುಸಿದು ಮನೆ ಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆ ಮಂದಿ ಬೇರೆ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ.


ಕೊಡಿಮರದಲ್ಲಿ ಮನೆಗೆ ಧರೆ ಕುಸಿತ:
ಕೊಡಿಮರದಲ್ಲೂ ಧರೆ ಕುಸಿತಗೊಂಡು ಪೂವಪ್ಪ ನಾಯ್ಕ ಎಂಬವರ ಮನೆಗೆ ಹಾನಿಯಾಗಿದೆ. ಅವರ ಮನೆಯವರನ್ನೂ ಕೂಡಾ ಬೇರೆ ಮನೆಗೆ ಸ್ಥಳಾಂತರಿಸಲಾಗಿದೆ.