ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದ ಹಿಂಭಾಗದಲ್ಲಿ ಇದ್ದ ಧರೆ ಕುಸಿದು ಹಿಮಾಯತುಲ್ ಇಸ್ಲಾಂ ಮದ್ರಸ ಕಟ್ಟಡ ಮತ್ತು ಅದಕ್ಕೆ ತಾಗಿಕೊಂಡಿದ್ದ ಮಸೀದಿಯ ಖತೀಬ್ ಮತ್ತು ಮದ್ರಸ ಅಧ್ಯಾಪಕರ ಕೊಠಡಿಯ ಮೇಲೂ ಬಿದ್ದಿದ್ದು ಅದೃಷ್ಠವಶಾತ್ ಸಂಭವನೀಯ ದುರಂತ ತಪ್ಪಿರುತ್ತದೆ.
ಶುಕ್ರವಾರ ಸಂಜೆಯ ಬಳಿಕ ಸುರಿದ ಭಾರೀ ಮಳೆಗೆ ರಾತ್ರಿ 10 ಗಂಟೆಯ ಹೊತ್ತಿಗೆ ಧರೆ ಕುಸಿದು ಬಿದ್ದಿದ್ದು, ಧರೆ ಕುಸಿದು ಬೀಳುವ ಸಂದರ್ಭದಲ್ಲಿ ಕೊಠಡಿಯಲ್ಲಿದ್ದವರು ಓಡಿ ಹೋಗಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.