ಪುತ್ತೂರು: ಜಿಡೆಕಲ್ಲು ರಾಗಿದಕುಮೇರಿ ರಸ್ತೆಗೆ ಬಿದ್ದ ಮರವನ್ನು ಊರ ಯುವಕರೇ ಸೇರಿ ತೆರವು ಮಾಡುವ ಮೂಲಕ ಭಾನುವಾರದ ರಜೆಯನ್ನು ಶ್ರಮದಾನದಿಂದ ಕಳೆಯುವ ಮೂಲಕ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜಿಡೆಕಲ್ಲು ರಾಗಿದಕುಮೇರಿ ಇಂಟರ್ಲಾಕ್ ರಸ್ತೆಯಲ್ಲಿ ಅಲ್ಲಲ್ಲಿ ಮರದ ಗೆಲ್ಲುಗಳು ಭಾಗಿ ರಸ್ತೆಗೆ ಬಿದ್ದುಕೊಂಡಿತ್ತು. ಊರಿನ ಯುವಕರೆಲ್ಲರು ಒಟ್ಟಾಗಿ ರಸ್ತೆಗೆ ಬಾಗಿದ ಗೆಲ್ಲುಗಳನ್ನು ಮತ್ತು ಬಿದ್ದ ಮರವನ್ನು ತೆರವು ಮಾಡಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.