ಪುತ್ತೂರು: ಕಳೆದ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮುಕ್ರಂಪಾಡಿ ಎಂಬಲ್ಲಿ ಈರ್ವರ ಖಾಸಗಿ ಒಡೆತನದ ಜಾಗದಲ್ಲಿ ಭೂ ಕುಸಿತ ಉಂಟಾಗಿ ಸ್ಥಳೀಯ ಮಹಿಳೆಯೊಬ್ಬರ ಮನೆಯ ನೀರಕಣಿಗೆ ಹಾನಿಯುಂಟಾಗಿ, ಆ ಮಹಿಳೆಯು ಪರಿಹಾರ ಕೋರಿ ನಗರಸಭೆಗೆ ಮನವಿ ಮಾಡಿರುವ ಘಟನೆ ಇತ್ತೀಚೆಗೆ ನಡೆಯಿತು.
ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಆನಂದಾಶ್ರಮದ ಬಳಿಯ ಮಹಿಳೆಯಾಗಿರುವ ಫಿಲೋಮಿನಾ ಕುವೆಲ್ಲೋರವರ ಮನೆಯ ನೀರಕಣಿಯು ಹಾನಿಗೊಳಪಟ್ಟಿರುವುದಾಗಿದೆ. ಫಿಲೋಮಿನಾ ಕುವೆಲ್ಲೋರವರು ಸರ್ವೆ ನಂ.153 1ಎ1ರಲ್ಲಿ .07.00 ಎಕ್ರೆ ಭೂಮಿಯನ್ನು ಅನುಭವಿಸುತ್ತಿದ್ದು ಈ ಭೂಮಿಯು ಎ.ಎಲ್.ಎನ್.ಎಸ್.ಆರ್ 15/2000-01ಪ್ರಕಾರ ಭೂ ಪರಿವರ್ತನಾ ಮಾಡಲಾಗಿರುತ್ತದೆ. ಆ ಜಾಗದಲ್ಲಿರುವ ಮನೆ ನಂಬ್ರ 1-1097/1ರಲ್ಲಿ ಫಿಲೋಮಿನಾ ಕುವೆಲ್ಲೋರವರು ವಾಸವಾಗಿದ್ದು ಮೇ 30 ರಂದು ಸುರಿದ ಭಾರೀ ಮಳೆಗೆ ಮನೆಯ ಹಿಂಭಾಗದ ಎರಡು ಖಾಸಗಿ ಒಡೆತನದ ಜಾಗದಲ್ಲಿನ ಮಣ್ಣು ಕುಸಿದು ಫಿಲೋಮಿನಾ ಕುವೆಲ್ಲೋರವರ ಮಾಮೂಲಿ ನೀರಕಣಿಗೆ ಬಿದ್ದು ಅತೀವ ನಷ್ಟವಾಗಿದೆ. ಆದ್ದರಿಂದ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರವನ್ನು ಮಂಜೂರುಗೊಳಿಸಬೇಕಾಗಿ ಫಿಲೋಮಿನಾ ಕುವೆಲ್ಲೋರವರು ನಗರಸಭಾ ಪೌರಾಯುಕ್ತರಿಗೆ ಮನವಿ ಮಾಡಿರುತ್ತಾರೆ.