ಪುತ್ತೂರು: ಭಾರತ್ ಕಟ್ಟಡ ಕಾರ್ಮಿಕ ಸಂಘ ಬೊಳ್ವಾರಿನಲ್ಲಿ ಜೂನ್ ತಿಂಗಳ ಮಾಸಿಕ ಸಭೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಸಂಘದ ಕಚೇರಿಯಲ್ಲಿ ನಡೆಯಿತು.

ಸಂಚಾರಿ ಆರೋಗ್ಯ ಘಟಕದ ಡಾಕ್ಟರ್ ಅಶ್ರಫ್ ಮಾತನಾಡಿ ಆರೋಗ್ಯ ಸಂಚಾರಿ ಘಟಕದಲ್ಲಿ ಕಾರ್ಮಿಕರಿಗೆ ಮತ್ತು ಅವರ ಕುಟುಂಬಸ್ಥರ ಆರೋಗ್ಯ ತಪಾಸಣೆ ನಡೆಸಲಾಗುವುದೆಂದು ತಿಳಿಸಿದರು. ಆರೋಗ್ಯ ಸಂಚಾರ ಘಟಕದಲ್ಲಿ ಬಿಪಿ,ಸಕ್ಕರೆ ಕಾಯಿಲೆ, ಲಿವರ್,ಕಿಡ್ನಿ ಟೆಸ್ಟ್ ಸೇರಿದಂತೆ ಇತರ ರೋಗಗಳ ಬಗ್ಗೆ ತಪಾಸನೆ ನಡೆಸಲಾಗುವುದೆಂದು ತಿಳಿಸಿದರು. ವಾಹನದಲ್ಲೇ ಲ್ಯಾಬ್ ಮತ್ತು ಇಬ್ಬರು ವೈದ್ಯರು ಇರುತ್ತಾರೆ ವಾಹನದಲ್ಲಿ ಔಷಧಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು ಮತ್ತು ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಮಾಡಿದರು.
ಭಾರತ್ ಕಟ್ಟಡ ಕಾರ್ಮಿಕರ ಅಧ್ಯಕ್ಷರಾದ ಅಶ್ರಫ್ ಕಾರ್ಯದರ್ಶಿಯಾದ ಪೌಲ್ ಡಿಸೋಜ, ಪ್ರಧಾನ ಕಾರ್ಯದರ್ಶಿಯಾದ ಲೋಕೇಶ್ ಹಾಗೂ ಸಂಘದ ಸಮಿತಿ ಸದಸ್ಯರು ಮತ್ತು ಕಟ್ಟಡ ಕಾರ್ಮಿಕರ ಭಾಗವಹಿಸಿದ್ದರು ಮತ್ತು ಸಂಚಾರಿ ಘಟಕ ಸಿಬ್ಬಂದಿಗಳು ಉಪಸ್ಥಿತರಿದ್ದರು.