ಪುತ್ತೂರು: ನಗರೋತ್ಥಾನ ನಗರಾಭಿವೃದ್ಧಿ ಇದರ ಅಡಿಯಲ್ಲಿ ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್ ಬಳಿಯಲ್ಲಿನ ಸಂಪೂರ್ಣ ಹದಗೆಟ್ಟ ಎರಡನೇ ಅಡ್ಡರಸ್ತೆಯನ್ನು ಪೂರ್ಣ ಕಾಂಕ್ರೀಟ್ ರಸ್ತೆಯಾಗಿ(163ಮೀ.ಉದ್ದ 4ಮೀ.ಅಗಲ) ಮೇಲ್ದರ್ಜೆಗೇರಿಸುವುದಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ಇತ್ತೀಚಿಗೆ ಅಭಿವೃದ್ಧಿ ಕಾರ್ಯಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಸಹಿತ ಸ್ಥಳೀಯ ನಿವಾಸಿಗಳು ಈ ವೇಳೆ ಹಾಜರಿದ್ದರು. ನಗರೋತ್ಥಾನದ ಅನುದಾನ ರೂ. 10ಲಕ್ಷವನ್ನು ಈ ರಸ್ತೆಗೆ ಕಾಯ್ದಿರಿಸಲಾಗಿದ್ದು, ಸಂಜೀವ ಮಠಂದೂರು ಅವರ ಅವಧಿಯಲ್ಲಿ ಅನುದಾನ ಇರಿಸಲಾಗಿತ್ತು. ಅದರಂತೆ ಕಾಮಗಾರಿ ಇದೀಗ ಪ್ರಾರಂಭಗೊಂಡಿದೆ. ಗುದ್ದಲಿ ಪೂಜೆ ಮಾಡುವ ಮೂಲಕ ರಸ್ತೆ ಅಗಲೀಕರಣ ಹಾಗೂ ರಸ್ತೆಯನ್ನು ಸಮತಟ್ಟು ಮಾಡುವ ಕೆಲಸಕ್ಕೆ ಸ್ಥಳೀಯ ನಗರಸಭಾ ಸದಸ್ಯರಾದ ಮನೋಹರ್ ಕಲ್ಲಾರೆ ಇವರ ಮುತುವರ್ಜಿಯೂ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ರಸ್ತೆ ಅಭಿವೃದ್ಧಿ ಕಾರ್ಯವೂ ಕೂಡ ಪ್ರಾರಂಭಗೊಂಡಿರುವುದು ಸ್ಥಳೀಯ ನಿವಾಸಿಗಳಿಗೆ ಸಂತಸದ ವಿಚಾರವಾಗಿದೆ.