ಕುರಿಯ-ಬಳ್ಳಮಜಲು 40 ವರ್ಷಗಳ ಹಿಂದಿನ ರಸ್ತೆ ವಿವಾದ- ಮಾತುಕತೆ ಮೂಲಕ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ಕುರಿಯದಿಂದ ಬಳ್ಳಮಜಲು ಎಸ್ ಸಿ ಕಾಲಿಗೆ ತೆರಳುವ ರಸ್ತೆಯ ವಿವಾದವನ್ನು ಶಾಸಕ ಅಶೋಕ್ ರೈ ಅವರು ಮಾತುಕತೆಯ ಮೂಲಕ ಇತ್ಯರ್ಥ ಮಾಡಿದ್ದು ಸುಮಾರು 40 ವರ್ಷಗಳ ವಿವಾದಕ್ಕೆ ಇತಿಶ್ರೀ ಹಾಡಲಾಗಿದ್ದು ವಿವಾದಿತ ರಸ್ತೆಗೆ ಕಾಂಕ್ರಿಟೀಕರಣವೂ ಪೂರ್ಣಗೊಂಡಿದೆ.



ಕುರಿಯದಿಂದ ಬಳ್ಳಮಜಲು ಎಂಬಲ್ಲಿಗೆ ತೆರಳುತ್ತಿದ್ದ ಈ ರಸ್ತೆಯ ಮಧ್ಯೆ ಅಣ್ಣು ಎಂಬವರ ಜಾಗವಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು. ರಸ್ತೆ ಇಲ್ಲದೆ ಕಾಲನಿ ನಿವಾಸಿಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಕಾಲನಿ ನಿವಾಸಿಗಳು, ಹಾಗೂ ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸನತ್ ರೈ ಮತ್ತು ಶಿವರಾಮ ಅಳ್ವ ಬಳ್ಳಮಜಲು ಇವರು ಶಾಸಕರ ಗಮನಕ್ಕೆ ತಂದು ವಿವಾದವನ್ನು ಇತ್ಯರ್ಥ ಮಾಡುವಂತೆ ಮನವಿ ಮಾಡಿದ್ದರು. ಅಣ್ಣು ಮ್ತತು ಅವರ ಪುತ್ರನನ್ನು ಕರೆಸಿದ ಶಾಸಕರು ಅವರ ಮೂಲಕ ಮಾತುಕತೆ ನಡೆಸಿ ರಸ್ತೆಗೆ ಜಾಗ ಬಿಟ್ಟುಕೊಡುವಂತೆ ಕೇಳಿಕೊಂಡಿದ್ದರು. ಆದರೆ ಜಾಗವನ್ನು ಅಳತೆ ಮಾಡಿದ ಬಳಿಕ ರಸ್ತೆ ಮಾಡಲು ತನ್ನ ಸಹಮತ ಇರುವುದಾಗಿ ಅಣ್ಣು ಹೇಳಿದ್ದರು. ಅದರಂತೆ ಜಾಗವನ್ನು ಕೆಲದಿನಗಳ ಹಿಂದೆ ಸಹಾಯಕ ಕಮಿಷನರ್ ಸೇರಿದಂತೆ ಕಂದಾಯ ಅಧಿಕಾರಿಗಳು ಅಳತೆ ಮಾಡಿಸಿದ್ದರು.
ರಸ್ತೆ ವಿವಾದ ಆ ಬಳಿಕ ಇತ್ಯರ್ಥವಾಗಿದ್ದು, ಅಗಲೀಕರಣ ಕಾಮಗಾರಿ ನಡೆದು ರಸ್ತೆಗೆ ರೂ.5 ಲಕ್ಷ ಅನುದಾನವನ್ನು ಇರಿಸುವ ಮೂಲಕ ಶಾಸಕರು ಕಾಂಕ್ರಿಟೀಕರಣ ಮಾಡಿಸಿದ್ದು, ಇದರಿಂದ 40 ವರ್ಷಗಳ ಹಿಂದಿ ರಸ್ತೆ ಬೇಡಿಕೆಯೊಂದು ಈಡೇರಿದೆ.

ಬಳ್ಳಮಜಲು ಕಾಲನಿ ನಿವಾಸಿಗಳು ರಸ್ತೆ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ಹಾಗೂ ಕಾಂಗ್ರೆಸ್ ಮುಖಂಡರಾದ ಶಿವರಾಮ ಆಳ್ವ ಅವರ ನೇತೃತ್ವದ ನಿಯೋಗ ತನ್ನನ್ನು ಭೇಟಿಯಾಗಿ ಅಲ್ಲಿನ ಕಾಲನಿಯ ರಸ್ತೆಯ ಸಮಸ್ಯೆಯ ಬಗ್ಗೆ ಗಮನ ಚೆಲ್ಲಿದ್ದರು. ಬಳಿಕ ತಾನು ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿ ಸ್ಥಳೀಯ ದಲಿತ ಕಾಲನಿಯ ಹಲವು ವರ್ಷಗಳ ಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಇದು ಮೂಲಭೂತ ಸೌಕರ್ಯವಾಗಿದ್ದು, ಇದಕ್ಕೆ ಅಡ್ಡಿಪಡಿಸುವ ಕೆಲಸವನ್ನು ಯಾರೂ ಮಾಡಬಾರದು. ಏನೇ ಇದ್ದರೂ ಅದನ್ನು ಮಾನವೀಯ ನೆಲೆಯಲ್ಲಿ ಕಂಡು ಜನರಿಗೆ ನೆರವಾಗುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ವಿನಂತಿಸುತ್ತಿದ್ದೇನೆ.
ಅಶೋಕ್ ರೈ, ಶಾಸಕರು, ಪುತ್ತೂರು

ಯಾರಿದಂಲೂ ಸಾಧ್ಯವಾಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ರಸ್ತೆ ಸಂಪರ್ಕವಿಲ್ಲದೆ ಕಾಲನಿ ನಿವಾಸಿಗಳು ಸಂಕಷ್ಟದಲ್ಲಿದ್ದರು. ವಿವಾದ ಇತ್ಯರ್ಥವಾಗಿ ರಸ್ತೆಯೂ ಅಭಿವೃದ್ದಿಯಾಗಿದೆ, ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.
ಶಿವರಾಮ ಆಳ್ವ, ಬಳ್ಳಮಜಲು


ಕುರಿಯ ವಲಯ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ವಿವಾದವನ್ನು ಶಾಸಕರ ಗಮನಕ್ಕೆ ತರುವ ಕೆಲಸವನ್ನು ಮಾಡಿದ್ದೇವೆ. ಶಾಸಕರು ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿದ್ದು ಕಾಲನಿ ನಿವಾಸಿಗಳು ಸೇರಿದಂತೆ ಗ್ರಾಮಸ್ಥರಿಗೆ ಸಂತಸವನ್ನು ತಂದಿದೆ.
ಸನತ್ ರೈ ಕುರಿಯ,
ವಲಯ ಕಾಂಗ್ರೆಸ್ ಅಧ್ಯಕ್ಷರು

LEAVE A REPLY

Please enter your comment!
Please enter your name here