ಪುತ್ತೂರು: ಷಣ್ಮುಖದೇವ ಪ್ರೌಢಶಾಲೆಯಲ್ಲಿ ನೂತನ ವರ್ಷದ ಶಿಕ್ಷಕ ಪೋಷಕ ಸಂಘದ ಮಹಾಸಭೆಯು ನಡೆಯಿತು.
ವಿದ್ಯಾರ್ಥಿನಿಯರಾದ ಮನವಿ, ಶರ್ಮಿಳಾ ಇವರ ದೇವತಾ ಸ್ತುತಿ ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಸಂಚಾಲಕರಾದ ಶಿವರಾಮ ಭಟ್ ಬೀರ್ಣಕಜೆ ಇವರು “ಶಾಲೆಯ ಪ್ರಗತಿ ಪಥದಲ್ಲಿ ನಡೆಯುತ್ತಿರುವುದು ನಮಗೆಲ್ಲ ಸಂತೋಷದ ವಿಷಯವೆಂದು” ನುಡಿದರು. ಈ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ ಎಲ್ಲರನ್ನೂ ಮನಸಾ ವಂದಿಸುತ್ತಾ ದಿನದ ಔಚಿತ್ಯವನ್ನು ತಿಳಿಸಿದರು.
ಶಾಲೆಯ ಶ್ರೇಯಸ್ಸಿಗೆ ಸದಾಸಹಕರಿಸುತ್ತಿರುವ ದಾನಿಗಳಿಗೆ, ಪೋಷಕರಿಗೆ ಧನ್ಯವಾದ ಅರ್ಪಿಸುತ್ತಾ ಶಾಲಾ ಅಧ್ಯಕ್ಷ ರಾದ ಶ್ರೀ ತೀರ್ಥಾನಂದ ದುಗ್ಗಳ ಇವರು” ಗ್ರಾಮದ ಮಕ್ಕಳ ಪ್ರಗತಿಗೆ ಶ್ರಮಿಸುವುದು ನಮ್ಮ ಧ್ಯೇಯ. ಅದಕ್ಕಾಗಿ ಏನು ಬೇಕೋ ಆ ನಿಟ್ಟಿನಲ್ಲಿ ನಾವೆಲ್ಲ ಜೊತೆಗೂಡಿ ಕರ್ತವ್ಯ ನಿರ್ವಹಿಸೋಣ ” ಎಂದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರೇವತಿ ಸರ್ವರಿಗೂ ಶುಭವನ್ನು ಹಾರೈಸಿದರು.2025-26 ನೇ ಸಾಲಿನ ನೂತನ ಶಿಕ್ಷಕ ರಕ್ಷಕ ಸಂಘ ರಚನೆಯಾಯಿತು. ಅಧ್ಯಕ್ಷರಾಗಿ ರೇವತಿ, ಉಪಾಧ್ಯಕ್ಷರಾಗಿ ಪುರುಷೋತ್ತಮ ದುಗ್ಗಳ, ಖಜಾಂಚಿಯಾಗಿ ಮಂಜುಳಾ ಉದಯಕುಮಾರ್ ಆಯ್ಕೆಯಾಗಿ ವೇದಾವತಿ ಕೆಮ್ಮಾರ, ಕವಿತಾ, ಸೌಮ್ಯಾ, ನಾಗವೇಣಿ, ಸತ್ಯವತಿ,ಲಕ್ಷ್ಮಣ ಗೌಡ, ಮಾಧವ ನಾಯ್ಕ, ಆದಂ,ಹೊನ್ನಪ್ಪ ಶೇಡಿಗುರಿ ಆಯ್ಕೆಯಾದರು. ಶಾಲಾ ಆಡಳಿತ ಸಮಿತಿಯ ನಿರ್ದೇಶಕರಾದ ಗಿರೀಶ್ ಪಾದೆಕ್ಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಖಜಾಂಚಿಗಳಾದ ದಿವಾಕರ ರೈ ಕರೆಮೂಲೆ ಸ್ವಾಗತಿಸಿ ಮುಖ್ಯ ಗುರುಗಳಾದ ಕೃಷ್ಣವೇಣಿ ವಂದಿಸಿದರು. ಶಿಕ್ಷಕಿ ಭವ್ಯಾ ಕಾರ್ಯಕ್ರಮ ನಿರೂಪಿಸಿದರು. ಪೋಷಕಬಂಧುಗಳು, ಶಾಲೆಯ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು