ಮಹಾಲಿಂಗೇಶ್ವರ ದೇವಳದ ಕಾಮಧೇನು ಗೋ ಶಾಲೆ ಅಭಿವೃದ್ಧಿಗೆ ಡಾ. ಪ್ರಸನ್ನ ಹೆಬ್ಬಾರ್ ದೇಣಿಗೆ ಸಮರ್ಪಣೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯ ಗೋವುಗಳಿಗೆ ಉಚಿತ ಆರೋಗ್ಯ ಸೇವೆ ನೀಡುವ ಕೊೖಲ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್ ಅವರು ರೂ. 50,೦೦1 ದೇಣಿಗೆಯನ್ನು ದೇವಳಕ್ಕೆ ಸಮರ್ಪಣೆ ಮಾಡಿದ್ದಾರೆ.

ಇತ್ತೀಚೆಗೆ ನವೀಕೃತ ತಾತ್ಕಾಲಿಕ ಕಾಮಧೇನು ಗೋ ಶಾಲೆಯ ಉದ್ಘಾಟನೆ ಸಂದರ್ಭ ಡಾ. ಪ್ರಸನ್ನ ಹೆಬ್ಬಾರ್ ಅವರು ಗೋ ಶಾಲೆಯಲ್ಲಿ ಇನ್ನಷ್ಟು ಕಾಮಗಾರಿ ನಡೆಸಲು ವೈಯುಕ್ತಿಕವಾಗಿ ದೇಣಿಗೆ ನೀಡುವ ಕುರಿತು ಭರವಸೆ ನೀಡಿದ್ದರು. ಅದರಂತೆ ಜೂ.16ರಂದು ಅವರು ದೇವಳಕ್ಕೆ ದೇಣಿಗೆ ಸಮರ್ಪಣೆ ಮಾಡಿದ್ದಾರೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಡಾ. ಪ್ರಸನ್ನ ಹೆಬ್ಬಾರ್ ಅವರಿಗೆ ದೇವಳದ ಗೌರವಾರ್ಥವಾಗಿ ಶಲ್ಯ ತೊಡಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಸಾದ ವಿತರಿಸಿದರು.

LEAVE A REPLY

Please enter your comment!
Please enter your name here