ರಾಮಕುಂಜ ಶಾರದಾನಗರ ನಿವಾಸಿ ಗಣೇಶ ನಿಧನ

0

ರಾಮಕುಂಜ: ಗ್ರಾಮದ ಶಾರದಾನಗರ ನಿವಾಸಿ ಗಣೇಶ(33ವ.)ರವರು ಅನಾರೋಗ್ಯದಿಂದ ಜೂ.16ರಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಗಣೇಶ ಅವರು ಸುಮಾರು 2 ವರ್ಷ ರಾಮಕುಂಜ ಗ್ರಾ.ಪಂ.ನಲ್ಲಿ ಕುಡಿಯುವ ನೀರು ಪಂಪು ಚಾಲಕರಾಗಿ ಕೆಲಸ ಮಾಡಿದ್ದರು. 1ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾದ ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ತುಸು ಚೇತರಿಸಿಕೊಂಡಿದ್ದರು. ಆ ಬಳಿಕ ಮನೆಯಲ್ಲೇ ಇದ್ದರು.

ಜೂ.15ರಂದು ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಮನೆಯವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ. ಮೃತರು ತಂದೆ ಐತ್ತ ಮುಗೇರ, ತಾಯಿ ಗಿರಿಜ, ಸಹೋದರರಾದ ಕೃಷ್ಣಪ್ಪ, ರಾಮಚಂದ್ರ, ಸಹೋದರಿಯರಾದ ಭವಾನಿ, ಯಮುನಾ, ಸುಲೋಚನಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here