ಕುಮಾರ ಮಂಗಲ ಶಾಲಾ ಮಂತ್ರಿಮಂಡಲ ರಚನೆ : ನಾಯಕನಾಗಿ ಧನ್ವಿತ್, ಉಪನಾಯಕನಾಗಿ ಆಶ್ಲೇಷ್

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025 -26ನೇ ಸಾಲಿನ ನೂತನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.

ಶಾಲಾ ನಾಯಕನಾಗಿ 7ನೇ ತರಗತಿಯ ಧನ್ವಿತ್ ಪಿ.ಕೆ, ಉಪನಾಯಕನಾಗಿ 7ನೇ ತರಗತಿಯ ಆಶ್ಲೇಷ ಎಸ್. ಕೆ ಆಯ್ಕೆಯಾದರು. ವಿರೋಧಪಕ್ಷದ ನಾಯಕನಾಗಿ ಗಗನ್, ಆರೋಗ್ಯಮಂತ್ರಿಯಾಗಿ ವೈಷ್ಣವಿ.ಎನ್, ಶಿಕ್ಷಣ ಮಂತ್ರಿಯಾಗಿ ಯಶಸ್ವಿ, ಕ್ರೀಡಾ ಮಂತ್ರಿಯಾಗಿ ಪದ್ವಿತ್.ಕೆ, ಸ್ವಚ್ಛತಾ ಮಂತ್ರಿಯಾಗಿ ಪ್ರಣಮ್. ಎನ್, ಆಹಾರ ಮಂತ್ರಿಯಾಗಿ ವೈಭವಿ. ಎನ್, ರಕ್ಷಣಾಮಂತ್ರಿಯಾಗಿ ವಿಜೀಶ್.ಕೆ. ಎ, ಸಾಂಸ್ಕೃತಿಕ ಮಂತ್ರಿಯಾಗಿ ವಿಷು ಜಿ.ಕೆ, ಕೃಷಿಮಂತ್ರಿಯಾಗಿ ಜಿತೇಶ್ ಆಯ್ಕೆಯಾದರು. ಶಾಲಾ ಮುಖ್ಯ ಗುರು ಸಂತೋಷ್ಎನ್. ಟಿ ಪ್ರಮಾಣವಚನ ಬೋಧಿಸಿದರು. ಅತಿಥಿ ಶಿಕ್ಷಕರುಗಳಾದ ಶ್ಯಾಮ್. ಕೆ, ಸುಪ್ರಿಯಾ. ಎ ಮತ್ತು ರಾಜೇಶ್ವರಿ. ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here