
ಪುತ್ತೂರು: ಪುತ್ತೂರಿನ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಬೆಂಗಳೂರಿನ ವಾಂಟಿವಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಕೈಜೋಡಿಸಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಗ್ರಾಮೀಣ ಭಾಗದ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ಗಳನ್ನು ವಿತರಿಸಿದರು.

ವಾಂಟಿವಾ ಸಂಸ್ಥೆಯ ಸಿಎಸ್ಆರ್ (CSR) ನಿಧಿಯ ಬೆಂಬಲದಿಂದ, ಆಕಾಂಕ್ಷಾ ಟ್ರಸ್ಟ್ ನಡೆಸಿದ ಈ ಅಭಿಯಾನದ ಭಾಗವಾಗಿ, ಒಟ್ಟು 29 ಶಾಲೆಗಳ 4,600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಿಟ್ಗಳನ್ನು ಶಾಲೆಯ ಶೈಕ್ಷಣಿಕ ವರ್ಷದ ಆರಂಭದೊಳಗೆ ವಿತರಿಸಿದರು. ಈ ಕಿಟ್ಗಳಲ್ಲಿ ಶಾಲಾ ಚೀಲ, ಕಂಪಾಸ್ ಬಾಕ್ಸ್ ಮತ್ತು ಹತ್ತು ನೋಟ್ಪುಸ್ತಕಗಳು ಸೇರಿದ್ದು, ಒಟ್ಟು 42,000ಕ್ಕೂ ಅಧಿಕ ಪುಸ್ತಕಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಲಾಗಿದೆ.

ಈ ಶೈಕ್ಷಣಿಕ ಸಹಾಯದಿಂದ ದಕ್ಷಿಣ ಕನ್ನಡ ಜಿಲ್ಲೆಯ 26 ಮತ್ತು ಕಾಸರಗೋಡು ಜಿಲ್ಲೆಯ 3 ಗ್ರಾಮೀಣ ಶಾಲೆಗಳು ಪ್ರಯೋಜನ ಪಡೆದುಕೊಂಡಿವೆ. ಈ ಯೋಜನೆ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಲ ನೀಡುವುದರ ಜೊತೆಗೆ, ಶೈಕ್ಷಣಿಕ ಸಮಾನತೆಗೆ ಸಹಾಯ ಮಾಡುವುದರಲ್ಲಿ ಸಹ ಪ್ರಾಮುಖ್ಯತೆ ಹೊಂದಿದೆ ಎಂದು ಡಾ. ಶ್ರೀಶ ಬೈಪದವು ತಿಳಿಸಿದ್ದಾರೆ.

“ಪ್ರತೀ ಮಕ್ಕಳು ಸಮಾನ ಶೈಕ್ಷಣಿಕ ಸೌಲಭ್ಯ ಪಡೆಯಬೇಕು ಎಂಬುದು ನಮ್ಮ ನಂಬಿಕೆ. ವಾಂಟಿವಾ ಸಂಸ್ಥೆಯ ಈ ಸಹಭಾಗಿತ್ವ ಗ್ರಾಮೀಣ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ನಿಜವಾದ ಬದಲಾವಣೆಗೆ ಕಾರಣವಾಗುತ್ತಿದೆ.”
– ಡಾ. ಶ್ರೀಶ ಬೈಪದವು, ಸಂಸ್ಥಾಪಕ ಟ್ರಸ್ಟಿ, ಆಕಾಂಕ್ಷಾ ಟ್ರಸ್ಟ್ ಪುತ್ತೂರು