ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ `ಶ್ರೀ ಗುರು ಸಾಲಗಾರ ಮರಣ ನಿಧಿ’ ವಿತರಣೆ

0

ಸದಸ್ಯ ಸಾಲಗಾರರು ಮೃತಪಟ್ಟಾಗ ಸಾಲದಿಂದ ಮುಕ್ತಗೊಳಿಸುವ ಯೋಜನೆ

ಪುತ್ತೂರು: ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸದಸ್ಯ ಸಾಲಗಾರರು ಮೃತಪಟ್ಟಾಗ ಅವರನ್ನು ಸಾಲದಿಂದ ಮುಕ್ತಗೊಳಿಸುವ ಶ್ರೀ ಗುರು ಸಾಲಗಾರರ ಮರಣ ನಿಧಿ ಎಂಬ ವಿಶೇಷ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದೆ. ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿಯಿದ್ದು ಪುತ್ತೂರಿನ ಉಪ್ಪಿನಂಗಡಿ, ಕಬಕ, ಪುರುಷರಕಟ್ಟೆ, ಕುಂಬ್ರ ಸೇರಿದಂತೆ 26 ಶಾಖೆಗಳನ್ನು ಹೊಂದಿರುವ ಶ್ರೀಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಶ್ರೀಗುರು ಸಾಲಗಾರ ಮರಣ ನಿಧಿ ಯೋಜನೆಯ ಮುಖಾಂತರ ಮರಣ ಹೊಂದಿದ ಸಾಲಗಾರರ ಸದಸ್ಯರ ಸಾಲಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಲಾಗುತ್ತಿದೆ.

ಸದಸ್ಯರಿಗೆ ನೀಡಲಾದ ಸಾಲವನ್ನು ಸಂಘದ ಆಡಳಿತ ಮಂಡಳಿಯ ಮಂಜೂರಾತಿ ಮೇರೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಿ. ಅವರ ಕುಟುಂಬಸ್ಥರಿಗೆ ಸಾಲದಿಂದ ಋಣ ಮುಕ್ತಾಯಗೊಳಿಸಿದ ಖಾತ್ರಿ ಪತ್ರವನ್ನು ನೀಡಲಾಗುತ್ತಿದೆ. ಸಂಘದ ಹೊಸ್ಮಾರ್ ಶಾಖೆಯ ಸಾಲಗರಾದ ನಾರಾವಿಯ ತಿಮ್ಮಕೋಡಿ ಗುರುಮೂರ್ತಿಯವರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಸಂಘದಿಂದ ಅವರು ಪಡೆದುಕೊಂಡಿದ್ದ ಸಾಲವನ್ನು ಸಂಘದ ಆಡಳಿತ ಮಂಡಳಿಯ ಮಂಜೂರಾತಿ ಮೇರೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಿದೆ. ಗುರುಮೂರ್ತಿಯವರ ಪತ್ನಿ ರತ್ನ ದೇವಾಡಿಗರವರು ಕಡಬ ತಾಲೂಕಿನ ಆಲಂಕಾರು ಗ್ರಾಮದ ಶರವೂರುನಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ವಾಸ್ತವ್ಯವಿದ್ದು ಸಂಘದವರು ಅವರ ನಿವಾಸಕ್ಕೆ ತೆರಳಿ ಸಾಲದಿಂದ ಋಣ ಮುಕ್ತಾಯಗೊಳಿಸಿದ ಖಾತ್ರಿ ಪತ್ರವನ್ನು ನೀಡಲಾಯಿತು.

ಸಂಘದ ನಿರ್ದೇಶಕರಾದ ಡಾ.ರಾಜಾರಾಮ ಕೆ.ಬಿ ಮತ್ತು ಜಯವಿಕ್ರಮ್ ಪಿ ಹಾಗೂ ಪುರುಷರಕಟ್ಟೆ ಪ್ರಭಾರ ಶಾಖಾ ವ್ಯವಸ್ಥಾಪಕ ಪವನ್ ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

83 ಕುಟುಂಬಗಳಿಗೆ ಮರಣ ನಿಧಿ ವಿತರಣೆ:
ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದಶ್ರೀ ಗುರು ಸಾಲಗಾರರ ಮರಣ ನಿಧಿ ಯೋಜನೆಯ ಮುಖಾಂತರ ಈ ತನಕ ಒಟ್ಟು 83 ಕುಟುಂಬಗಳಿಗೆ ರೂ.61,58,593 ಮೊತ್ತದ ಸಾಲಗಾರರ ಮರಣ ನಿಧಿಯನ್ನು ನೀಡಿ ಅವಲಂಬಿತ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಆ ಕುಟುಂಬಗಳನ್ನು ಋಣ ಮುಕ್ತಗೊಳಿಸಿ ಸಹಕಾರ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆಯನ್ನು ಮಾಡುತ್ತಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.


ನಮ್ಮ ಕಷ್ಟ ಕಾಲದ ಸಮಯದಲ್ಲಿ ನನ್ನ ಪತಿಯವರು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಹೊಸ್ಮರ್ ಶಾಖೆಯಿಂದ ಸಾಲ ಪಡೆದುಕೊಂಡಿದ್ದರು. ಅವರು ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಅವರು ಸಂಸ್ಥೆಯಿಂದ ಪಡೆದುಕೊಂಡಿದ್ದ ಸಾಲವನ್ನು ಸಂಪೂರ್ಣ ಮುಕ್ತಾಯಗೊಳಿಸಿ, ನಮಗೆ ಖಾತ್ರಿ ಪತ್ರವನ್ನು ನೀಡಿದ ಸಂಘದ ಆಡಳಿತ ಮಂಡಳಿಗೆ ನಮ್ಮ ತುಂಬು ಹೃದಯದ ವಂದನೆಗಳನ್ನು ಸಲ್ಲಿಸುತ್ತೇವೆ.
ರತ್ನ ದೇವಾಡಿಗ

LEAVE A REPLY

Please enter your comment!
Please enter your name here