ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮತ್ತು ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇವುಗಳ ಜಂಟಿ ಆಶ್ರಯ ದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಗುರು ಸದಾಶಿವ ರೈ ನಡುಬೈಲು ಭಾಗವಹಿಸಿ ಆಸನ, ಪ್ರಾಣಾಯಾಮ, ಧ್ಯಾನ ಇವುಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಉಪನ್ಯಾಸವನ್ನು ನೀಡುತ್ತಾ ನಡೆಸಿಕೊಟ್ಟರು.
ಯೋಗವು ವೈಯಕ್ತಿಕ ಯೋಗ ಕ್ಷೇಮ ಮತ್ತು ಜಾಗತಿಕ ಸುಸ್ಥಿರತೆಯ ಬಗ್ಗೆ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಯೋಗ ಗುರುಗಳು ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ರೈ ನಡುಬೈಲು ಇವರನ್ನು ಗೌರವಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ ಶಾಲಾ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ಕರ್ನೂರು ಗುತ್ತು ಇವರು ಮಾತನಾಡಿ, ಯೋಗವು ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಖಾತ್ರಿಪಡಿಸುವ ಜೀವನ ವಿಧಾನವಾಗಿದೆ. ನಮ್ಮ ಆರೋಗ್ಯದಿಂದ ದೊಡ್ಡ ಸಂಪತ್ತು ಯಾವುದು ಇಲ್ಲ. ಅದನ್ನು ರಕ್ಷಿಸಲು ಯೋಗಾಸನವನ್ನು ಮಾಡಬೇಕಾಗಿದೆ. ಯೋಗ ಗುರುಗಳಾದ ಸದಾಶಿವ ರೈ ಗಳ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವ ಯೋಗ ದಿನದ ಪ್ರತಿಜ್ಞೆಯನ್ನು ಗಣಿತ ಶಿಕ್ಷಕರಾದ ಪುರುಷೋತ್ತಮ ಬಿ ಇವರು ಮಾಡಿದರು.
ಮುಖ್ಯ ಗುರುಗಳಾದ ಪ್ರೇಮ್ ಕುಮಾರ್ ಸ್ವಾಗತಿಸಿದರು. ಶಿಕ್ಷಕರಾದ ಇಂದಿರಾ., ದಮಯಂತಿ ,ತಿ ಮೀನಾಕ್ಷಿ, ಪ್ರಜ್ಞಾ ಸುವರ್ಣ, ದಿವ್ಯ ತುಳಸಿ, ಕಚೇರಿ ಸಿಬಂದಿಯಾದ ಹೇಮಾವತಿ ಕೆ. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸಹಾಯಕರಾದ ಚಂದ್ರಶೇಖರ ಸಹಕರಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಗುಮಾಸ್ತರಾದ ಶೀನಪ್ಪ ಮೇನಾಲ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ದೇವಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.