ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಧ್ಯಕ್ಷೆಯಾಗಿ ನ್ಯಾಯವಾದಿ ಸಿಲ್ವಿಯಾ ಡಿ’ಸೋಜ, ಕಾರ್ಯದರ್ಶಿಯಾಗಿ ಪದ್ಮಾವತಿ ಮೋಹನ್, ಕೋಶಾಧಿಕಾರಿಯಾಗಿ ಹರಿಣಿ ಕೆ. ಪುತ್ತೂರಾಯರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಲವೀನಾ ಹನ್ಸ್, ನಿಯೋಜಿತ ಅಧ್ಯಕ್ಷರಾಗಿ ಕಾರ್ಯಪ್ಪ ವಿ.ಪಿ, ಉಪಾಧ್ಯಕ್ಷರಾಗಿ ಮೊಹಮ್ಮದ್ ಶಾಕೀರ್, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಅಬ್ದುಲ್ ರಝಾಕ್ ಕಬಕಕಾರ್ಸ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಮೌನೇಶ್ ವಿಶ್ವಕರ್ಮ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಮಾಧವ ಗೌಡ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ರಾಮ ಕೆ, ಯೂತ್ ಸರ್ವಿಸ್ ನಿರ್ದೇಶಕರಾಗಿ ಸುಶಾಂತ್ ಹಾರ್ವಿನ್, ಬುಲೆಟಿನ್ ಎಡಿಟರ್ ಹಾಗೂ ಕ್ಲಬ್ ಸಲಹೆಗಾರರಾಗಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಆಸ್ಕರ್ ಆನಂದ್, ಚೇರ್ಮನ್ ಗಳಾಗಿ ಸ್ವೀಕೃತ್ ಆನಂದ್(ಮೆಂಬರ್ ಶಿಪ್), ತೋಮಸ್ ಫೆರ್ನಾಂಡೀಸ್(ಟಿ.ಆರ್.ಎಫ್), ಜಯಕುಮಾರ್ ನಾಯರ್(ಪಬ್ಲಿಕ್ ಇಮೇಜ್), ಶ್ರೇಯಸ್ ಆನಂದ್(ಸಿ.ಎಲ್.ಸಿ.ಸಿ), ಹರ್ಷ ಎ(ವಿನ್ಸ್), ಸುಧೀರ್ ಬಿ(ಜಿಲ್ಲಾ ಪ್ರಾಜೆಕ್ಟ್) , ಡಾ.ಸಚಿನ್ ಶಂಕರ್(ಪೋಲಿಯೋ ಪ್ಲಸ್), ಸುಪ್ರೀತ್ ಕೆ.ಸಿ(ಟೀಚ್), ರೆ|ವಿಜಯ ಹಾರ್ವಿನ್(ರೋಟರಿ ಎಥಿಕ್ಸ್), ಜೋನ್ಸನ್(ವಾಟರ್ ಸ್ಯಾನಿಟೇಶನ್), ದಿವಿನ್ ವರ್ಮ(ಕ್ರೀಡೆ), ಡಾ.ನಾಗಶ್ರೀ(ಆರೋಗ್ಯ ಜಾಗೃತಿ), ನಿಧೀಶ್ ಉಡುಪ(ಕೌಶಲ್ಯಾಭಿವೃದ್ಧಿ), ಶಶಿಧರ್ ರೈ(ಜಿಲ್ಲಾ ಸಾಂಸ್ಕೃತಿಕ), ಸಿಯಾಕ್(ರೋಟರ್ಯಾಕ್ಟ್ ಎಲೈಟ್), ನವೀನ್ ಹನ್ಸ್(ಇಂಟರ್ಯಾಕ್ಟ್ ಸುದಾನ), ರಂಜಿತ್ ಮಥಾಯಿಸ್(ವೆಬ್-ಸಾಮಾಜಿಕ ಜಾಲತಾಣ), ಜೋಯಲ್ ಕುಟಿನ್ಹಾ(ಫೆಲೋಶಿಪ್), ದೇವರಾಜ್(ರೋಟರ್ಯಾಕ್ಟ್ ಬೆಟ್ಟಂಪಾಡಿ), ಅಶ್ವಿನ್ ಎಲ್.ಶೆಟ್ಟಿ (ರೋಟರ್ಯಾಕ್ಟ್ ಸವಣೂರು), ಡಾ.ಕೀರ್ತನ್ ಕಜೆ(ಡೆಂಟಲ್ ಹೆಲ್ತ್), ಬಾಲು ನಾಯ್ಕ್/ದೇವರಾಜ್(ಸಾಂಸ್ಕೃತಿಕ), ಶಮೀರುದ್ದೀನ್(ಜಿಲ್ಲಾ ಸ್ಪೋರ್ಟ್ಸ್) ರವರು ಆಯ್ಕೆಯಾಗಿದ್ದಾರೆ ಎಂದು ರೋಟರಿ ಕ್ಲಬ್ ಪುತ್ತೂರು ಎಲೈಟ್ ನಿಕಟಪೂರ್ವ ಅಧ್ಯಕ್ಷ ಅಶ್ವಿನ್ ಎಲ್.ಶೆಟ್ಟಿ, ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳ ಪರಿಚಯ..
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿಲ್ವಿಯಾ ಡಿ’ಸೋಜರವರು ಪುತ್ತೂರಿನಲ್ಲಿ ವಕೀಲರಾಗಿ, ನೋಟರಿಯಾಗಿ ಮತ್ತು ಕ್ರೈಸ್ತ ವಿವಾಹಗಳ ನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವೈಎಂಸಿಎ ಕರ್ನಾಟಕ ರಾಜ್ಯ ಘಟಕದ ಕೋಶಾಧಿಕಾರಿಯಾಗಿ ಮತ್ತು ವೈಎಂಸಿಎ ಪುತ್ತೂರಿನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪದ್ಮಾವತಿ ಮೋಹನ್ ರವರು ಸುದಾನ ಕ್ಯಾಂಪಸ್ಸಿನಲ್ಲಿರುವ ಫ್ರೊಟೆಸ್ಟೆಂಟ್ ಕ್ರೈಸ್ತ ಸಮುದಾಯ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಹರಿಣಿ ಪ್ರತ್ತೂರಾಯರವರು ಎಸ್. ಡಿ. ಎಂ ಕಾಲೇಜು ಉಜಿರೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜೂ.28:ಪದ ಪ್ರದಾನ..
ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ನೆಹರುನಗರದ ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಸಭಾಂಗಣದಲ್ಲಿ ಜೂ.28 ರಂದು ಜರಗಲಿದೆ. ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಗ್ರ್ಯಾಂಟ್ಸ್ ಸಬ್ ಕಮಿಟಿ ಚೇರ್ಮನ್ ಹಾಗೂ ಟಿ.ಆರ್. ಎಫ್ ಕ್ಯಾಡರ್ ಎಸ್.ಕೆ ಸಂಜಯ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರಿನ ಅಥೆನಾ ಆಸ್ಪತ್ರೆಯ ಎಂ.ಡಿ, ಕರ್ನಾಟಕ ವೈಎಂಸಿಎ ಸೌತ್ ಸೆಂಟ್ರಲ್ ರೀಜನ್ ಚೇರ್ಮನ್ ಆರ್.ಎಸ್ ಶೆಟ್ಟಿಯಾನ್ ರವರು ಭಾಗವಹಿಸಲಿದ್ದಾರೆ.