ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಮಾನವಿಕ ವಿಭಾಗದಿಂದ “ಕಾಲಿಗೆ ಮಣ್ಣು, ಮನಸ್ಸಿಗೆ ಮಜಾ-ಕೆಸರಿನ ಗದ್ದೆಯಲ್ಲಿ ಆಟೋಟ ಸ್ಪರ್ಧೆ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ “ಕಾಲಿಗೆ ಮಣ್ಣು, ಮನಸ್ಸಿಗೆ ಮಜಾ” ಶೀರ್ಷಿಕೆ ಅಡಿಯಲ್ಲಿ ಮಾನವಿಕ ವಿಭಾಗದ ವಿದ್ಯಾರ್ಥಿಗಳಿಗೆ ಕೆಸರಿನ ಗದ್ದೆಯಲ್ಲಿ ನಡೆಯಲ್ಪಡುವ ವಿವಿಧ ಆಟೋಟ ಸ್ಪರ್ಧೆಗಳನ್ನು ಪುತ್ತೂರು ಬೆದ್ರಾಳ ಸಮೀಪದ ಅಪ್ಪಿ ಮೂಲ್ಯರವರ ಗದ್ದೆಯಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಕೃಷಿ ಮಾಡುವ ಜನರ ಒಲವು ಕ್ಷೀಣಿಸುತ್ತಿದೆ, ಕಾರಣಗಳು ಹಲವಾರು. ಕೃಷಿಯ ಮೇಲಿನ ಒಲವನ್ನು ಹೆಚ್ಚಿಸಲು ಕಾಲೇಜಿನ ಮಾನವಿಕ ವಿಭಾಗವು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತೋಷದ ವಿಚಾರ. ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವ, ಕೃಷಿಯ ವಿವಿಧ ಸವಾಲುಗಳು ಮತ್ತು ಪರಿಹಾರಗಳು ಮನದಟ್ಟು ಮಾಡುವ ಮೂಲಕ ದೇಶದ ಪ್ರಗತಿ ಕಾಣಲು ಸಾಧ್ಯ, ಎಲ್ಲರೂ ತಂತ್ರಜ್ಞಾನದ ಆವಿಷ್ಕಾರದಲ್ಲಿ ತೊಡಗಿದರೆ ಹೊಟ್ಟೆಗೆ ಅನ್ನ ನೀಡುವವನು ಯಾರು ಎಂಬ ದೂರದೃಷ್ಟಿಯಂದಿಗೆ ಕೃಷಿಗೆ ಯುವಜನರು ಒಲವು ತೋರಿದಲ್ಲಿ ನಮ್ಮ ರಾಷ್ಟ್ರವು ಅಭಿವೃದ್ಧಿಯ ಕಡೆಗೆ ಸಾಗಬಹುದಾಗಿದೆ ಎಂದರು.


ಕಾರ್ಯಕ್ರಮದ ಪ್ರಾಯೋಜಕರಾದ ಅಪ್ಪಿ ಮೂಲ್ಯರ ಪುತ್ರ ನಾರಾಯಣ ಮೂಲ್ಯರವರನ್ನು ಸನ್ಮಾನಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಾಸುದೇವ ಎನ್. ಕಾರ್ಯಕ್ರಮದ ಪ್ರಾಮುಖ್ಯತೆ ವಿವರಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿ ಪವನ್ ಸ್ವಾಗತಿಸಿ, ತೃತೀಯ ಬಿ.ಎ. ವಿದ್ಯಾರ್ಥಿ ಮಹಮ್ಮದ್ ಮುಜಾಮಿಲ್ ವಂದಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕೃತಿಕಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಧನ್ಯಶ್ರೀ ಮತ್ತು ಬಳಗ ತುಳುನಾಡಿನ ಪಾಡ್ದನವನ್ನು ಹಾಡುವ ಮೂಲಕ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಯಾದ ಧನುಷ್ ಶೇಖರ್ ರಾವ್ ಕೋಣವನ್ನು ಓಡಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕ್ಯಾ| ಜೋನ್ಸನ್ ಡೇವಿಡ್ ಸಿಕ್ವೇರಾ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್ ಎಂ. ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು. ಮಾನವಿಕ ವಿಭಾಗದ ಉಪನ್ಯಾಸಕರಾದ ಹರ್ಷಿತ ಪಿ. ವಿ, ಅನಿಷಾ ಡಿ. ಬಿ. ಸಹಕರಿಸಿದರು.

LEAVE A REPLY

Please enter your comment!
Please enter your name here