ಪುತ್ತೂರು: ಅಂತರರಾಷ್ಟ್ರೀಯ ಸಹಕಾರಿ ವರ್ಷ 2025 ಅಂಗವಾಗಿ ಆ. 2 ರಂದು ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ಆವರಣ ಮತ್ತು ಬ್ಯಾಂಕಿನ ಪರಿಸರದ ಸಾರ್ವಜನಿಕ ಸ್ಥಳವನ್ನು ಸ್ವಚ್ಚಗೊಳಿಸುವ ಮೂಲಕ ಸ್ವಚ್ಚತಾ ಸೆ.ಸಹಕಾರ ಕಾರ್ಯಕ್ರಮವನ್ನು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಜತೆಗೂಡಿ ನೆರವೇರಿಸಿದರು.

ಈ ಸ್ವಚ್ಚಾತಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿ. ಉಪಾಧ್ಯಕ್ಷ ಪ್ರವೀಣ್ ರೈ ಎಂ ಪಂಜೊಟ್ಟು, ಕೋಶಾಧಿಕಾರಿ ಯುವರಾಜ ಕೆ ನಿರ್ದೇಶಕರುಗಳಾದ ಸುಂದರ ಪೂಜಾರಿ ಬಡಾವು, ಸುಜಾತ ರಂಜನ್ ರೈ, ಚಂದ್ರಾವತಿ, ರಾಜುಮೊನು ಪಿ.ಆರ್ ಮತ್ತು ಬ್ಯಾಂಕಿನ ವ್ಯವಸ್ಥಾಪಕಿ ಸುಮನ ಯಂ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.