ಪುತ್ತೂರು: ನಿನ್ನೆ ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಹಿರಿಯ ನಾಯಕರಾದ ಜನಾರ್ದನ ಪೂಜಾರಿಯವರ ಹೇಳಿಕೆ ವೈರಲ್ ಆಗುತ್ತಿದೆ. ಅವರು ಧರ್ಮಸ್ಥಳದ ಪರವಾಗಿ ಮಾತನಾಡುವಾಗ ಕ್ರೈಸ್ತ ಮತ್ತು ಮುಸ್ಲಿಂ ಮರ ದಫನ ಭೂಮಿಯ ಕುರಿತಾಗಿಯೂ ಮಾತನಾಡಿದ್ದಾರೆ. ಅವರು ಮಸೀದಿಯಲ್ಲಿ ಹೂಳಿಲ್ವಾ? ಚರ್ಚಲ್ಲಿ ಹೂಳಿಲ್ವಾ? ಎನ್ನುವ ಮಾತನ್ನು ಅವರು ಹೇಳಿದ್ದಾರೆ.
ಇದು ಕಾಂಗ್ರೆಸ್ ಗೆ ತುಂಬಾ ಮುಜುಗರ ತರುವಂತಹ ವಿಚಾರ ಮತ್ತು ಮುಸಲ್ಮಾನ ಸಮುದಾಯಕ್ಕೆ ತುಂಬಾ ನೋವನ್ನು ತರುವ ವಿಚಾರ ಎಂದು ಪುತ್ತೂರು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಮಹಮ್ಮದ್ ಅಲಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅವರ ಈ ಹೇಳಿಕೆ ಖಂಡನೀಯ. ದಫನ ಭೂಮಿ ಇರುವಂತಹುದು ಮಸೀದಿಯಲ್ಲಿ ಅಲ್ಲ.ಮಸೀದಿಯ ಪಕ್ಕದ ಸ್ಮಶಾನ ಭೂಮಿಯಲ್ಲಿ ಇರುವುದು. ಚರ್ಚಿನ ಪಕ್ಕ ಚರ್ಚಿನ ಪಕ್ಕ ದಫನ ಭೂಮಿಗಳಿವೆ. ಅದು ಅಧಿಕೃತ ಧಪನ ಭೂಮಿ. ಯಾರೂ ಮರಣಹೊಂದಿದ್ದಾರೆ ಅವರ ಸಂಸ್ಕಾರವನ್ನು ಗೌರವಯುತವಾಗಿ ಅಲ್ಲಿ ಹೂಳಾಲಾಗುತ್ತದೆ. ಇದು ಹಿಂದಿನಿಂದಲೇ ಬಂದ ಪದ್ದತಿ.ದಫನಗೊಂಡಿರುವವರ ಎಲ್ಲಾ ದಾಖಲೆಗಳು ಮಸೀದಿಯಲ್ಲಿ ಇದೆ. ಚರ್ಚಿನದ್ದೂ ಇರುತ್ತದೆ. ಧರ್ಮಸ್ಥಳ ಪ್ರಕರಣಕ್ಕೂ, ಮಸೀದಿ ಚರ್ಚಿನ ವಿಷಯ ಯಾಕೆ ತರ್ಬೇಕಿತ್ತು ಇವರು. ಅವಶ್ಯಕತೆಯೇ ಇರಲಿಲ್ಲ.1977ರ ನಂತರ ಯಾರೆಲ್ಲ ಸತ್ತು ಮಲಗಿದ್ದಾರೆ ಅವರೆಲ್ಲ ಜನಾರ್ದನ ಪೂಜಾರಿ ಅವರಿಗೆ ಮತ ಹಾಕಿದವರು. ಅದು ಕ್ರೈಸ್ತ, ಮುಸ್ಲಿಂ ಆಗಿರಬಹುದು ಇವರಿಗಾಗಿ ಮತ, ಕೆಲಸ ಮಾಡಿದವರು ಎಂದರು.
ಇವರು ಧರ್ಮಸ್ಥಳದ ಪರ ಮಾತನಾಡಲಿ, ವಿರೋಧ ಮಾತನಾಡಲಿ ನಮ್ಮ ಆಕ್ಷೇಪ ಇಲ್ಲ. ಆದರೆ ಯಾವುದೇ ವಿಚಾರ ತರುವಾಗ ಮುಸಲ್ಮಾನ, ಕ್ರೈಸ್ತರ ವಿಚಾರ ಯಾಕೆ ತರುತ್ತೀರಿ ನೀವು. ನೀವು 9 ಸಲ ಚುನಾವಣೆಗೆ ನಿಂತಾಗ ಗೆದ್ದಾಗಲೂ, ಸೋತಾಗಲೂ ಮತ ಹಾಕಿದ್ದು ಮುಸಲ್ಮಾನರು, ಕ್ರೈಸ್ತರು ಇದು ಅವರಿಗೆ ನೆನಪಿರಬೇಕು.ನಾವು ತುಂಬಾ ಗೌರವ ಕೊಡುವಂತಹ ನಾಯಕರು. ಇವರ ಎಡಬಿಡಂಗಿತನ, ಅಸಂಬದ್ಧ ಹೇಳಿಕೆಗಳಿಂದ ಅವರು ಸೋತರು, ಕಾಂಗ್ರೆಸ್ಸನ್ನು ಸೋಲಿಸಿದರು.
ಯಾವುದೇ ಮುಸಲ್ಮಾನರು, ನಾಯಕರು, ಉಲೆಮಾ, ಮುಖಂಡರು ಇಷ್ಟರವರೆ ಧರ್ಮಸ್ಥಳ ಕುರಿತು ಚಕಾರ ಎತ್ತಿಲಿಲ್ಲ. ಸೌಜನ್ಯ, ಪದ್ಮಲತಾ, ವೇದವಳ್ಳಿ ಪ್ರಕರಣಗಳಲ್ಲಿ ಯಾರೂ ಮಾತನಾಡಲಿಲ್ಲ, ಯಾಕೆಂದರೆ ನಮಗೆ ಅದು ಸಂಬಂಧಿಸಿದಲ್ಲ. ಬಿಜೆಪಿಯವರು ಮಾತನಾಡುವುದೇ ಮುಸ್ಲಿಂ, ಕೇರಳ, ಕಾಶ್ಮೀರ ಇಲ್ಲದೆ ಬದುಕುವುದಿಲ್ಲ. ಅವರು ಬೆಳಿಗ್ಗೆ ಎದ್ದು ಜಪ ಮಾಡುವುದೇ ಮುಸಲ್ಮಾನರನ್ನು. ಆದರೆ ಜನಾರ್ದನ ಪೂಜಾರಿಯವರು ಬಿಜೆಪಿ ದಾಟಿಯಲ್ಲಿ ಯಾಕೆ ಮಾತನಾಡಬೇಕು.ಕಾಂಗ್ರೆಸ್ ಪಕ್ಷ, ಕಾರ್ಯಕರ್ತರು ಮುಜುಗರಕ್ಕೆ ಒಳಗಾಗಿದ್ದಾರೆ.ಪಕ್ಷದ ಸಿದ್ದಾಂತ, ಸಿದ್ದರಾಮಯ್ಯ ಕುರಿತು ತೆಗಳಿ ಮೋದಿಯವರನ್ನು ಹೊಗಳಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಮಾತನಾಡಲಿಲ್ಲ. ಇನ್ನು ನಮಿಗೆ ಸಹನೆ ಇಲ್ಲ.ನಾನು ಇವರಿಗೆ ಹಾಕಿದಷ್ಟು ಜಯಕಾರ ಬೇರೆ ಯಾವ ನಾಯಕರಿಗೂ ಹಾಕಲಿಲ್ಲ ಎಂದರು.
ಪುತ್ತೂರು ಬ್ಲಾಕ್ ಉಪಾಧ್ಯಕ್ಷ ಮೌರಿಶ್ ಮಸ್ಕರೇನಸ್ ಮಾತನಾಡಿ,ಚರ್ಚ್ ನಲ್ಲಿ ದಫನ ಮಾಡುವಂತಹುದು ಇತ್ತು. ಬಹಳ ವರ್ಷಗಳ ಹಿಂದೆ ಸಂತರು, ದೊಡ್ಡ ಧಾರ್ಮಿಕ ನಾಯಕರು ತೀರಿ ಹೋದಾಗ ಹೂತದ್ದು ಇದೆ.ಆದರೆ ಸುಮಾರು 50 ವರ್ಷಗಳ ಹಿಂದೆ ಇದಕ್ಕೆ ತಿದ್ದುಪಡಿ ತಂದು ಯಾವುದೇ ಕಾರಣಕ್ಕೂ ಚರ್ಚಿನ ಒಳಗಡೆ ಯಾರ ಶವವನ್ನೂ ಹೂಳಿಕ್ಕೆ ಇಲ್ಲ ಎಂದು ಎಂದು ನಮಗೆ ಸರಕಾರ ಪ್ರತಿತೊಂದು ಚರ್ಚ್ ವ್ಯಾಪ್ತಿಯಲ್ಲಿ ಭೂಮಿಯನ್ನು ಕೊಟ್ಟಿದೆ.ಅಲ್ಲೇ ಶವ ದಫನ ಮಾಡುವುದುಎಂದರು.