ಪುತ್ತೂರು: ಶಿವಮೊಗ್ಗದಲ್ಲಿ ನಡೆದ 6ನೇ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧಾಕೂಟದಲ್ಲಿ ಇನ್ಸ್ಟಿಟ್ಯೂಟ್ ಆಪ್ ಕರಾಟೆ ಆ್ಯಂಡ್ ಮಾರ್ಷಲ್ ಆರ್ಟ್ ಪುತ್ತೂರು ಶಾಖೆಯ ಅಧ್ವಿತ್ ಶರ್ಮ ಚಿನ್ನ ಮತ್ತು ಬೆಳ್ಳಿ, ಅನ್ಶ್ ಕಾಮತ್ ಚಿನ್ನ ಮತ್ತು ಕಂಚಿನ ಪದಕ, ಯಶಸ್ ಬೆಳ್ಳಿ ಮತ್ತು ಕಂಚಿನ ಪದಕ ಪಡೆದುಕೊಂಡಿರುತ್ತಾರೆ.
ಇವರು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಇವರ ಮಾರ್ಗದರ್ಶನದಲ್ಲಿ ಹಿರಿಯ ಶಿಕ್ಷಕರಾದ ಶಿವಪ್ರಸಾದ್ ಡಿ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.