ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಬೆಳ್ಳಾರೆ ಶಾಖಾ ಸಲಹಾ ಸಮಿತಿ ರಚನೆ- ಅಧ್ಯಕ್ಷ; ಜಗನ್ನಾಥ ಪೂಜಾರಿ, ಉಪಾಧ್ಯಕ್ಷ; ವಿಶ್ವನಾಥ ಪೂಜಾರಿ

0

ಪುತ್ತೂರು: ಪ್ರತಿಷ್ಠಿತ ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘವು ಬ್ಯಾಂಕಿಂಗ್ ವ್ಯವಹಾರ ನಡೆಸಲು ಜಿಲ್ಲಾಮಟ್ಟದ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಬೆಳ್ಳಾರೆಯಲ್ಲಿ ನೂತನ ಶಾಖಾ ಕಚೇರಿ ತೆರೆಯುವ ಕುರಿತು ಆ.೨೦ರಂದು ಅಪರಾಹ್ನ ಬೆಳ್ಳಾರೆ ಅಮ್ಮು ರೈ ಕಾಂಪ್ಲೆಕ್ಸ್‌ನ ಅನುಗ್ರಹ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ಅವರು ಸಂಘದ ಬೆಳವಣಿಗೆ ಮತ್ತು ಸಂಘ ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸ್ಥಳೀಯರು ಬೆಳ್ಳಾರೆಯಲ್ಲಿ ಸಂಘದ ಶಾಖೆ ತೆರೆಯಲು ಪೂರ್ಣ ಸಹಕಾರ ನೀಡಲು ಬದ್ಧರಾಗಿದ್ದೇವೆಂದು ತಿಳಿಸಿದರು. ಈ ವೇಳೆ ಬೆಳ್ಳಾರೆ ಶಾಖೆಗೆ ಸಲಹಾ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಜಗನ್ನಾಥ ಪೂಜಾರಿ ಮುಕ್ಕೂರು, ಉಪಾಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ಆಯ್ಕೆಗೊಂಡರು. ಸದಸ್ಯರಾಗಿ ಮಹೇಶ್ ಕಲ್ಲಪಣೆ, ಧರ್ಮಪಾಲ ಶೇಣಿ, ಲೋಕೇಶ್ ಮಣಿಮಜಲು, ಅನಿಲ್ ಐವರ್ನಾಡು, ವನಿತಾ ಸಾರಕೆರೆ ಆಯ್ಕೆಗೊಂಡರು. ಅಧ್ಯಕ್ಷರಾಗಿ ಆಯ್ಕೆಗೊಂಡ ಜಗನ್ನಾಥ ಮುಕ್ಕೂರು, ಉಪಾಧ್ಯಕ್ಷರಾಗಿ ಆಯ್ಕೆಗೊಂಡ ವಿಶ್ವನಾಥ ಪೂಜಾರಿಯವರು ಮಾತನಾಡಿ, ಬೆಳ್ಳಾರೆಯಲ್ಲಿ ಬ್ಯಾಂಕಿನ ಶಾಖೆ ಆರಂಭಿಸಲು ಸಹಕಾರ ನೀಡಿ, ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.


ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಜನಾರ್ದನ ಕದ್ರ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಂಘದ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here