ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೇವಳದ ವಠಾರದ ವತಿಯಿಂದ ದೇವಳದ ವಠಾರದಲ್ಲಿ ವರ್ಷಂಪ್ರತಿ ಪೂಜಿಸಲ್ಪಡುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ನಿರ್ವಿಘ್ನವಾಗಿ ನಡೆಯಲು ಪ್ರತಿ ವರ್ಷದಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣಪತಿ ಗುಡಿಯಲ್ಲಿ ಸೇವಾರ್ಥವಾಗಿ ನಡೆಸುವ ರಂಗಪೂಜೆಯನ್ನು ಆ.25ರಂದು ನಡೆಯಿತು.
ಗಣಪತಿ ಗುಡಿಯ ಮುಂದೆ ರಂಗಪೂಜೆಯನ್ನು ಅರ್ಚಕ ವೆ.ಮೂ.ಜಯರಾಮ ಜೋಯಿಷ ಅವರು ನೆರವೇರಿಸಿದರು. ಸಮಿತಿ ಸಕ್ರಿಯ ಕಾರ್ಯಕರ್ತ ದೇವಿಪ್ರಸಾದ್ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ಸಹಿತ ಹಲವಾರು ಮಂದಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.