ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಆದಿನಾಗ ಬ್ರಹ್ಮಮೊಗೇರ್ಕಳ ಗರಡಿ ಇದರ ಅಭಿವೃದ್ಧಿಗೆ ಧಾರ್ಮಿಕ ದತ್ತಿ ಇಲಾಖೆ ಯಿಂದ ರೂ 10 ಲಕ್ಷ ಮಂಜೂರು ಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದಶಾಸಕ ಅಶೋಕ್ ಕುಮಾರ್ ರೈ ಅವರನ್ನು ಗರಡಿಯ ಸಮಿತಿ ಸದಸ್ಯರು ಭೇಟಿಯಾಗಿ ಅಭಿನಂದಿಸಿದರು.
ಶ್ರೀ ಆದಿನಾಗ ಬ್ರಹ್ಮ ಸೇವಾ ಟ್ರಸ್ಟ್ (ರಿ) ಕಲ್ಪನೆ ಇದರ ಅಧ್ಯಕ್ಷ ಕೆ ಎಸ್ ಕರಿಯ ಸರ್ವೆ, ಕಾರ್ಯದರ್ಶಿ ಗಣೇಶ್ ನೇರೋಳ್ತಡ್ಕ, ಸದಸ್ಯರಾದ ಬಾಬು ಕಲ್ಲಗುಡ್ಡೆ, ಬಾಲಕೃಷ್ಣ ಕಲ್ಲಗುಡ್ಡೆ, ಶಿವಕುಮಾರ್ ಕಲ್ಲಗುಡ್ಡೆ, ನವೀನ ಕಲ್ಲಗುಡ್ಡೆ, ಸುಮಂತ್ ಕಟ್ಟತ್ತಡ್ಕ, ದಿನೇಶ್ ಭಕ್ತ ಕೋಡಿ, ಶರತ್ ನೇರೋತ್ತಡ್ಕ ,ಶರಣ್ ನೇರೋತ್ತಡ್ಕ, ಪೊಡಿಯ ಸರ್ವೆ, ಅರುಣ್ ಕಲ್ಲಮ, ಚೋಮ ಭಕ್ತ ಕೋಡಿ, ವಿನಯ ಭಕ್ತಕೋಡಿ , ಲಿಂಗಪ್ಪ ನೇರೋತ್ತಡ್ಕ, ಅಖಿಲ್ ನೇರೋತ್ತಡ್ಕ, ರಾಜೇಶ್ ನೇರೋತ್ತಡ್ಕ, ರಾಧಾಕೃಷ್ಣ ಬಾವಿಕಟ್ಟೆ, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷರು, ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೆ ದೋಳ ಗುತ್ತು ಉಪಸ್ಥಿತರಿದ್ದರು.