ಕೌಕ್ರಾಡಿ: ಕಾಡಾನೆ ದಾಳಿಗೆ ಕೃಷಿ ಹಾನಿ

0

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಪರಿಸರದಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿಗೊಳಿಸಿದೆ.


ಮಣ್ಣಗುಂಡಿ ನಿವಾಸಿ ರಾಜೀವಿ ಅವರ ಮನೆಯ ಬಳಿ ಹಾಗೂ ಪರಿಸರದ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವುದಾಗಿ ವರದಿಯಾಗಿದೆ. ರಾಜೀವಿ ಅವರ ಮನೆ ಸಮೀಪವೇ ತೆಂಗಿನಗಿಡ, ಅಡಿಕೆ ಮರ, ಬಾಳೆಗಿಡಗಳನ್ನು ಕಾಡಾನೆ ನಾಶಗೊಳಿಸಿದೆ. ಮನೆ ಸಮೀಪಕ್ಕೆ ಕಾಡಾನೆ ಬಂದಿರುವುದು ಮನೆಯವರಲ್ಲೂ ಸಹಜವಾಗಿಯೇ ಆತಂಕ ಉಂಟುಮಾಡಿದೆ.

LEAVE A REPLY

Please enter your comment!
Please enter your name here