ಲಾಯಿಲ: ಸೆ.7ರಂದು ಲೋಕಾರ್ಪಣೆಗೊಂಡ ಸಂಗಮ ಕಲಾ ಭವನಕ್ಕೆ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್ ಭೇಟಿ ನೀಡಿದರು.
ಸಂಗಮ ಕಲಾ ಭವನದ ಪಾಲುದಾರ ಕೆ. ಧರ್ಮಣ್ಣ ಗೌಡ, ಪುತ್ರ ಕಾರ್ತಿಕ್, ಉಜಿರೆ ಶ್ರೀ ಮಹಾಲಕ್ಷ್ಮಿ ಸ್ಟೋರ್ಸ್ ನ ಮಾಲಕ ಭರತ್ ಕುಮಾರ್ ಇವರೊಂದಿಗೆ ಕಲಾಭವನವನ್ನು ವೀಕ್ಷಿಸಿದರು. ಸಭಾಭವನ, ಅನ್ನಛತ್ರ, ಪಾಕಶಾಲೆಯನ್ನು ವೀಕ್ಷಿಸಿ ಶುಭಹಾರೈಸಿ ಸಂತೋಷ ವ್ಯಕ್ತಪಡಿಸಿದರು.