![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿರುವ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಹುಲ್ಲುಗಾವಲಿಗೆ ಮಾ.11ರಂದು ಮಧ್ಯಾಹ್ನದ ವೇಳೆಗೆ ಬೆಂಕಿ ಬಿದ್ದಿದ್ದು ಹುಲ್ಲುಗಳು ಬೆಂಕಿಗಾಹುತಿಯಾಗಿದೆ.
ಸ್ಥಳೀಯರು ಹಾಗೂ ಇಲಾಖಾ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರಕ್ಕೆ ಇಲ್ಲಿ 1 ಸಾವಿರ ಎಕ್ರೆಯಷ್ಟು ಜಾಗವಿದ್ದು ಇದರಲ್ಲಿ ಬಹುಪಾಲು ಮುಳಿಹುಲ್ಲಿನ ಗುಡ್ಡವಾಗಿದೆ. ಬೇಸಿಗೆಯಲ್ಲಿ ಇದರಲ್ಲಿರುವ ಮುಳಿಹುಲ್ಲು ಒಣಗಿರುವುದರಿಂದ ಕೂಡಲೇ ಬೆಂಕಿ ಹಿಡಿಯುತ್ತದೆ. ಪ್ರತಿವರ್ಷವೂ ಇಲ್ಲಿನ ಹುಲ್ಲುಗಾವಲು ಬೆಂಕಿಗಾಹುತಿಯಾಗುತ್ತಲೇ ಇದೆ. ದಾರಿಹೋಕರು ಬೀಡಿ, ಸೀಗರೇಟ್ ತುಂಡುಗಳನ್ನು ಸೇದಿ ಎಸೆಯುವುದರಿಂದ ಹುಲ್ಲುಗಾವಲು ಬೆಂಕಿಗಾಹುತಿಯಾಗುತ್ತಿದೆ.