ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವ ಕೈಗೊಳ್ಳದ ಕಾಮಗಾರಿಯಿಂದ ಸಾರ್ವಜನಿಕರಿಗೆ ಸಮಸ್ಯೆ – ನಗರಸಭಾ ಬಿಜೆಪಿ ಸದಸ್ಯರಿಂದ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ

0

7 ದಿನದೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಧರಣಿ ಎಚ್ಚರಿಕೆ – ಕೆ ಜೀವಂಧರ್ ಜೈನ್

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆ, ಅಪಾಯಕಾರಿ ಮರದ ಗೆಲ್ಲುಗಳ ತೆರವು,ರಸ್ತೆ ಬದಿ ಗಿಡಗಂಟಿಗಳ ತೆರವು, ಮುಂತಾದ ಮಳೆಗಾಲದ ಮುಂಚಿತವಾಗಿಯೇ ಮಾಡಬೇಕಾದ ಕಾಮಗಾರಿಗಳನ್ನು ನಿರ್ವಹಿಸದೇ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಮತ್ತು ವಿವಿಧ ಅನುದಾನ ಕಾಮಗಾರಿಗಳ ಕುರಿತು ಬೇಡಿಕೆ ಮುಂದಿಟ್ಟು ಪುತ್ತೂರು ನಗರಸಭಾ ಬಿಜೆಪಿ ಸದಸ್ಯರ ವತಿಯಿಂದ ಜು.4 ರಂದು ನಗರಸಭೆ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.


ಈ ಭಾರಿ ಮಳೆಗಾಲದ ಪೂರ್ವಭಾವಿಯಾಗಿ ನಗರಸಭೆಯಿಂದ ನಡೆಯುವ ಮುನ್ನೆಚ್ಚರಿಕೆ ಕ್ರಮ, ಗ್ರಾಸ್ ಕಟ್ಟಿಂಗ್ ಕೂಡಾ ಮಾಡಿಲ್ಲ.‌ ಅದೇ ರೀತಿ 15 ನೇ ಹಣಕಾಸು ಯೋಜನೆ ಅನುದಾನದ ಕ್ರೀಯಾಯೋಜನೆ ಮಾಡುವ ಮುಂಚಿತವಾಗಿ ಸದಸ್ಯರ ಗಮನಕ್ಕೆ ತರಬೇಕು. ನಗರೋತ್ಥಾನ ಯೋಜನೆ, ನಗರಸಭಾ ನಿಧಿಯ ಮೂಲಕ ವಾರ್ಡ್ ಗಳಿಗೆ ನೀಡಲಾಗುವ ಅನುದಾನದ ಹಂಚಿಕೆಯಲ್ಲಿ ವಾರ್ಡ್ ನ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಡೆಸಬೇಕು. ಜಲಸಿರಿ ಬಗ್ಗೆ ಸಾರ್ವಜನಿಕ ದೂರುಗಳ ಬಗ್ಗೆ ಗಮನ ಹರಿಸಬೇಕು. ಈ ಎಲ್ಲಾ ಸಮಸ್ಯೆಗಳನ್ನು 7 ದಿನದ ಒಳಗೆ ಮಾಡದಿದ್ದಲ್ಲಿ ನಾವು ನಗರಸಭೆ ಎದುರು ಧರಣಿ ಕೂರಲು ನಿರ್ಣಯ ಮಾಡಿದ್ದೇವೆ ಎಂದು ಮನವಿಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ಸದಸ್ಯರಾಗಿರುವ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ,ಸದಸ್ಯರುಗಳಾದ ಗೌರೀ ಬನ್ನೂರು, ಮೋಹಿನಿ ವಿಶ್ವನಾಥ, ಲೀಲಾವತಿ, ಸುಂದರ ಪೂಜಾರಿ ಬಡಾವು, ಪ್ರೇಮ್ ಕುಮಾರ್, ರಮೇಶ್ ರೈ, ಪ್ರೇಮ ನಂದಿಲ, ಪದ್ಮನಾಭ ನಾಯ್ಕ್, ಸಂತೋಷ ಕುಮಾರ್, ನವೀನ್ ಪೆರಿಯತ್ತೋಡಿ, ಇಂದಿರಾ ಆಚಾರ್ಯ, ಮನೋಹರ್ ಕಲ್ಲಾರೆ, ಬಾಲಚಂದ್ರ ಕೆಮ್ಮಿಂಜೆ, ಮಮತಾ ರಂಜನ್, ಪೂರ್ಣಿಮಾ, ವಸಂತ ಕಾರೆಕ್ಕಾಡು, ಪದ್ಮನಾಭ ನಾಯ್ಕ್, ದೀಕ್ಷಾ ಪೈ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ , ಜಯಶ್ರೀ ಎಸ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here