ಮನೆಯಲ್ಲಿ ಅಂತಿಮ ದರ್ಶನ ಪಡೆದ ಸಾರ್ವಜನಿಕರು
ಇಂದು ಮುಂಜಾನೆ ಹೃದಯಘಾತದಿಂದ ನಿಧನರಾದ ಸುಬ್ರಮಣ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ರವರ ಪ್ರಾರ್ಥಿವ ಶರೀರ ಅರಂತೋಡಿಗೆ ತಲುಪುತ್ತಿದಂತೆ ಪೇಟೆಯ ಅಂಗಡಿ ಮುಂಗಟ್ಟುಬಂದ್ ಮಾಡಿ ಶೋಕಾಚರಣೆಯಲ್ಲಿ ಭಾಗಿಯಾದರು.
ಸುಬ್ರಮಣ್ಯದಿಂದ ನೇರವಾಗಿ ಅರಂತೋಡು ಅವರ ಮನೆಗೆ ತಲುಪಿದಾಗ ಸಾರ್ವಜನಿಕರು ಬಂಧು ಮಿತ್ರರು ಆಗಮಿಸಿ ನೂರಾರು ಮಂದಿ ಅಂತಿಮ ದರ್ಶನ ಪಡೆದರು.