![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
- ಗೌರವಾಧ್ಯಕ್ಷ: ಮನಮೋಹನ ರೈ, ಅಧ್ಯಕ್ಷ: ಸೀತಾರಾಮ ಗೌಡ ಮಿತ್ತಡ್ಕ, ಕಾರ್ಯದರ್ಶಿ: ಸಂದೀಪ್ ರೈ ಬಾಜುವಳ್ಳಿ, ಕೋಶಾಧಿಕಾರಿಯಾಗಿ ಪ್ರವೀಣ್ ಕರ್ನಪ್ಪಾಡಿ ಆಯ್ಕೆ
ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ವರ್ಷಂಪ್ರತಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿಯ ಮಹಾಸಭೆ ಏ. 17 ರಂದು ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರ ಅಧ್ಯಕ್ಷತೆಯಲ್ಲಿ ದೇವಾಲಯದದಲ್ಲಿ ನಡೆಯಿತು. ಕಳೆದ ಎರಡು ವರ್ಷಗಳ ಉತ್ಸವದ ಲೆಕ್ಕಪತ್ರವನ್ನು ಇದೇ ವೇಳೆ ಮಂಡಿಸಲಾಯಿತು. 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿ ಅಧಿಕಾರ ಹಸ್ತಾಂತರಿಸಲಾಯಿತು.
ಗೌರವಾಧ್ಯಕ್ಷರಾಗಿ ಉದ್ಯಮಿ ಮನಮೋಹನ ರೈ ಚೆಲ್ಯಡ್ಕ, ಅಧ್ಯಕ್ಷರಾಗಿ ಬೆಟ್ಟಂಪಾಡಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪುತ್ತೂರು ಏಳ್ಮುಡಿಯಲ್ಲಿರುವ ಫ್ರೆಂಡ್ಸ್ ಬೇಕರಿಯ ಪಾಲುದಾರ ಸಂದೀಪ್ ರೈ ಬಾಜುವಳ್ಳಿ, ಕೋಶಾಧಿಕಾರಿಯಾಗಿ ಪ್ರವೀಣ್ ಕರ್ನಪ್ಪಾಡಿಯವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಮನಮೋಹನ ರೈಯವರು ಮಾತನಾಡಿ ಕೊರೊನಾದಿಂದಾಗಿ ಕಳೆದೆರಡು ವರ್ಷ ಅದ್ದೂರಿಯಾಗಿ ನಡೆಸಲು ಸಾಧ್ಯವಾಗದೇ ಇದ್ದುದರಿಂದ ಈ ಬಾರಿ ವೈಭವದಿಂದ ನಡೆಸಲು ಎಲ್ಲರೂ ಪ್ರಯತ್ನಿಸೋಣ’ ಎಂದರು. ನೂತನ ಅಧ್ಯಕ್ಷ ಸೀತಾರಾಮ ಗೌಡ ರವರು ಎಲ್ಲರ ಸಹಕಾರ ಕೋರಿದರು. ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಾಗೇಶ್ ರೈ ಮೂರ್ಕಾಜೆ, ಕೋಶಾಧಿಕಾರಿ ಉದಯ ಕುಮಾರ್, ಸದಸ್ಯರಾದ ಡಾ. ಸುಬ್ರಹ್ಮಣ್ಯ ವಾಗ್ಲೆ, ಸತೀಶ್ ರೈ ಮೂರ್ಕಾಜೆ, ಶೇಷಪ್ಪ ರೈ ಮೂರ್ಕಾಜೆ, ಅರುಣ್ ಪ್ರಕಾಶ್ ರೈ ಮದಕ, ದುರ್ಗಾಪ್ರಸಾದ್ ಜೆ., ಶಿವಪ್ರಸಾದ್ ತಲೆಪ್ಪಾಡಿ, ಉಮೇಶ್ ಮಿತ್ತಡ್ಕ, ರವಿರಾಜ್ ಅಮೀನ್, ಜಗದೀಶ್ ಸುವರ್ಣ, ರಂಜಿತ್ ತಲೆಪ್ಪಾಡಿ, ಹರೀಶ್ ಬೆದ್ರಾಡಿ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ರಮೇಶ್ ಗೌಡ ಬಳ್ಳಿತ್ತಡ್ಡ ಸ್ವಾಗತಿಸಿ ವಂದಿಸಿದರು