![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸಂಬಂಧಿಕರೋರ್ವರ ಬೈಕ್ನಲ್ಲಿ ಹಿಂಬದಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ಬೈಕ್ನಿಂದ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಎ.20ರಂದು ಸಂಜೆ ಬೆಳ್ಳಿಪ್ಪಾಡಿಯ ಕೋರಿಯ ಎಂಬಲ್ಲಿ ನಡೆದಿದೆ. ಬೆಳ್ಳಿಪ್ಪಾಡಿ ಗ್ರಾಮದ ಅಳಿಮೆ ನಿವಾಸಿ ಶೇಷಪ್ಪ ಗೌಡರ ಪತ್ನಿ ಗಿರಿಜಾ (62ವ.) ಎಂಬವರು ಮೃತಪಟ್ಟವರು. ಬೆಳ್ಳಿಪ್ಪಾಡಿ ಅಂಗನವಾಡಿಯಿಂದ ಗಿರಿಜಾರವರು ತನ್ನ ಮೊಮ್ಮಗಳೊಂದಿಗೆ ಅಳಿಮೆಗೆ ಬೈಕಿನಲ್ಲಿ ಬರುತ್ತಿದ್ದ ಗಿರಿಜಾರವರ ಸಂಬಂಧಿ ಬಲ್ನಾಡು ಉಜ್ರುಪಾದೆ ನಿವಾಸಿ ದಿವಾಕರ ಎಂಬವರ ಬೈಕ್ನಲ್ಲಿ ಬರುತ್ತಿದ್ದರು. ಬೆಳ್ಳಿಪ್ಪಾಡಿಯ ಕೋರಿಯ ಎಂಬಲ್ಲಿ ರಸ್ತೆಯ ಹಂಪ್ಸ್ನಲ್ಲಿ ಬೈಕ್ನಿಂದ ಗಿರಿಜಾರವರು ರಸ್ತೆಗೆ ಎಸೆಯಲ್ಪಟ್ಟರು. ಬಳಿಕ ಇವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪುತ್ರ ನೀರಕಟ್ಟೆ ಜಲವಿದ್ಯುತ್ ಸ್ಥಾವರದ ಉದ್ಯೋಗಿ ಗಿರೀಶ್, ಸೊಸೆ ರೋಹಿಣಿ, ಪುತ್ರಿ ಅಶ್ವಿನಿ, ಅಳಿಯ ಶೈಲೇಶ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.