ವಿಟ್ಲ: ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ಧನ ದೇವಸ್ಥಾನ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿಯ ಪ್ರಯುಕ್ತ ಯಕ್ಷಶ್ರೀ ಹವ್ಯಾಸಿ ಬಳಗದಿಂದ ‘ ವಾಯುಪುತ್ರೋ ಮಹಾಬಲಃ’ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭರತ್ ರಾಜ್( ಪ್ರಸಿದ್ಧ ಯಕ್ಷಗಾನ ಕಲಾವಿದರಾದ ದಿ. ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರ ಪುತ್ರ) ಮದ್ದಳೆಯಲ್ಲಿ ಕುಮಾರ ಶ್ರೇಯಸ್ ಮತ್ತು ಕುಮಾರ ಉಜ್ವಲ್ ಚೆಂಡೆಯಲ್ಲಿ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ವೀಣಾ ನಾಗೇಶ್ ತಂತ್ರಿ, ಆಶಾಲತಾ ವಿ.ಕೆ, ಗೀತಾ ಕುದ್ದಣ್ಣಾಯ, ರಮಾದೇವಿ ಆಚಾರ್ ಮೊದಲಾದವರು ಸಹಕರಿಸಿದರು.