ಉಪ್ಪಿನಂಗಡಿ: ಸುಮಾರು ಒಂದೂವರೆ ಗಂಟೆಯಷ್ಟು ಉಪ್ಪಿನಂಗಡಿಯಲ್ಲಿ ಎ.4ರಂದು ಸುರಿದ ಮಳೆಗೆ ಬಿ.ಸಿ.ರೋಡು- ಗುಂಡ್ಯ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವಾಂತರದಿಂದಾಗಿ ಅಂಗಡಿಗಳಿಗೆ ನೀರು ನುಗ್ಗುವಂತಾಗಿದೆ.
ಇಲ್ಲಿನ ಹೆದ್ದಾರಿ ಬದಿಯಲ್ಲಿದ್ದ ದೊಡ್ಡ ಚರಂಡಿಯೊಂದನ್ನು ಬಿ.ಸಿ.ರೋಡು- ಗುಂಡ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಮುಚ್ಚಿರುವುದೇ ಅಂಗಡಿಗಳಿಗೆ ನೀರು ನುಗ್ಗಲು ಕಾರಣ ಎಂದು ದೂರು ವ್ಯಕ್ತವಾಗಿದೆ.
ಬುಧವಾರ ಸಂಜೆ ಏಕಾಏಕಿ ಸುರಿದ ಮಳೆಯಿಂದ ಹೆದ್ದಾರಿ ಬದಿ ಇರುವ ಹೋಟೆಲ್ ಸ್ಕಂದ ಹಾಗೂ ಜಿನಸು ಅಂಗಡಿ ಜಲಾವೃತಗೊಂಡಿತ್ತು. ಹೆದ್ದಾರಿಯ ಇಂತಹ ಅಪೂರ್ಣ ಕಾಮಗಾರಿ ಈ ಬಾರಿಯ ಮಳೆಗಾಲದಲ್ಲೂ ಇದ್ದರೆ ಹಲವು ಮಂದಿಗೆ ಸಮಸ್ಯೆ ಎದುರಾಗುವ ಸಂಭವವಿದೆ ಎಂದು ನಾಗರಿಕರು ತಿಳಿಸಿದ್ದು ಅಗತ್ಯಕ್ರಮಕ್ಕೆ ಆಗ್ರಹಿಸಿದ್ದಾರೆ.