ಸವಣೂರು : ಸೇವಾ ಭಾರತಿ ಸಾವಯವ ಕೃಷಿ ಪರಿವಾರ ಪುತ್ತೂರು,ಸಾವಯವ ಕೃಷಿ ಪರಿವಾರ ತೀರ್ಥಹಳ್ಳಿ ಇದರ ವತಿಯಿಂದ ಗೋಬರ್ ಗ್ಯಾಸ್ ಫಲಾನುಭವಿ ರೈತರಿಗೆ ಮಾಹಿತಿ ಮತ್ತು ತರಬೇತಿ ಕಾರ್ಯಗಾರ ಸವಣೂರು ಯುವಕ ಮಂಡಲದಲ್ಲಿ ಮೇ.9 ರಂದು ನಡೆಯಿತು.
ಕಾರ್ಯಕ್ರಮವನ್ನು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಉದ್ಘಾಟಿಸಿದರು. ವೇದಿಕೆಯಲ್ಲಿ ಶ್ರೀವತ್ಸ, ರಾಜ್ಯ ಸಂಚಾಲಕರು ಸಾವಯವ ಕೃಷಿ ಪರಿವಾರ, ಬೋಜಣ್ಣ ಪ್ರಧಾನ ಕಾರ್ಯದರ್ಶಿ ಸಾವಯವ ಕೃಷಿ ಪರಿವಾರ, ಸೇವಾ ಭಾರತಿ ತಾಲೂಕು ಪ್ರಧಾನ ಕಾರ್ಯದರ್ಶಿ ಮೂಲಚಂದ್ರ, ಕೋಶಾಧಿಕಾರಿ ಗೋವಿಂದ ಬೋರ್ಕರ್ ಉಪಸ್ಥಿತರಿದ್ದರು. ವಿಜಯ ಕುಮಾರ್ ರೈ ಕೋರಂಗ ಅಧ್ಯಕ್ಷ ಸೇವಾ ಭಾರತಿ ಸ್ವಾಗತಿಸಿದರು. ರಾಜೇಶ್ ಇಡ್ಯಾಡಿ ನಿರೂಪಿಸಿದರು.ಗಂಗಾಧರ ಪೆರಿಯಡ್ಕ ವಂದಿಸಿದರು.