![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ದ.ಕ.ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ 6ನೇ ಅಥವಾ ನಂತರದ ತರಗತಿಗಳಿಗೆ ದಾಖಲಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ.6 ಕೊನೆಯ ದಿನಾಂಕವಾಗಿದೆ. ಮಂಗಳೂರಿನ ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯ, ಬಂಟ್ವಾಳ ತಾಲೂಕಿನ ಕೈರಂಗಳದ ಶಾರದಾ ಗಣಪತಿ ವಿದ್ಯಾಕೇಂದ್ರ, ಮಾಣಿ ಬಾಲವಿಕಾಸ ಆ.ಮಾ.ಶಾಲೆ, ವಿಟ್ಲ ಜೆಸಿಸ್ ಆ.ಮಾ.ಶಾಲೆ ವಿಟ್ಲ, ವಿದ್ಯಾಗಿರಿ ಎಸ್ವಿಎಸ್ ಆ.ಮಾ.ಶಾಲೆ, ಬೆಳ್ತಂಗಡಿ ತಾಲೂಕಿನ ಉಜಿರೆ ಎಸ್ಡಿಎಂ ಆ.ಮಾ.ಶಾಲೆ, ಹಳೆಕೋಟೆ ವಾಣಿ ಆ.ಮಾ.ಶಾಲೆ, ಮಡಂತ್ಯಾರು ಸೆಕ್ರೇಡ್ ಹಾಟ್ಸ್ ಪ್ರೌ.ಶಾಲಾ ವಿಭಾಗದಲ್ಲಿ ದಾಖಲಾತಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿ ಮಂಗಳೂರು 08242451269, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಪುತ್ತೂರು 9480843115 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.