ಕೆಯ್ಯೂರು: ಕೆಯ್ಯೂರು ಹಾಲು ಉತ್ಪಾದಕರ ಸಂಘ ಇದರ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದಲ್ಲಿ ಜೂ16ರಂದು ನಡೆಯಿತು.
ಕೆ.ಎಂ.ಎಫ್ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಯೋಗ ಶಿಕ್ಷಕರಾದ ಕೆಪಿಎಸ್ ಕೆಯ್ಯೂರು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವೇಶ್ವರ ಭಟ್ ಯೋಗದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೆಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಕೆ.ಎಂ.ಎಫ್ ವಿಸ್ತರಣಾಧಿಕಾರಿ ನಾಗೇಶ್, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ಮುಖ್ಯ ಗುರು ಬಾಬು,ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್, ಕೆಯ್ಯೂರು ಹಾ.ಉ.ಸ.ಸಂಘದ ನಿರ್ದೇಶಕರಾದ ಶಶಿಧರ ರಾವ ಬೊಳಿಕಲ, ಪದ್ಮನಾಭ ರೈ ಡಿ, ಮಹಾಲಿಂಗ ಪಟಾಳಿ, ಪದ್ಮನಾಭ ಪಿ.ಎಸ್, ರಾಮಣ್ಣ ಗೌಡ ಮಾಡಾವು, ಈಶ್ವರಿ ಜೆ ರೈ ಸಂತೋಷ್ ನಗರ, ಶಿವಪ್ಪ ನಾಯ್ಕ, ವಿಜಯ ಉಪಸ್ಥಿತರಿದ್ದರು.
ಸಾಂದೀಪನಿ ಸಂಸ್ಥೆಯ ಯೋಗ ಶಿಕ್ಷಕ ನವೀನ್ ಕುಮಾರ್, ರಾಷ್ಟ್ರ ಮಟ್ಟದ ಯೋಗಪಟು ಕು.ತೃಪ್ತಿ ಯೋಗಾಬ್ಯಾಸ ನಡೆಸಿ ಕೊಟ್ಟರು. ಸಂಘದ ಕಾರ್ಯದರ್ಶಿ ಬಾಸ್ಕರ ರೈ ಮಠ ಸ್ವಾಗತಿಸಿ, ವಂದಿಸಿದರು. ಸಂಘದ ಎ.ಐ. ಕಾರ್ಯಕರ್ತ ಚಂದ್ರಹಾಸ.ಬಿ ರೈ , ಸಿಬ್ಬಂದಿ ಪದ್ಮಯ್ಯ.ಪಿ. ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಕೆಪಿಎಸ್ ಕೆಯ್ಯೂರು ವಿಧ್ಯಾರ್ಥಿಗಳು, ಗ್ರಾಮಸ್ಥರು ಬಾಗವಹಿಸಿದರು.