ಉಪ್ಪಿನಂಗಡಿ: ಅಂಡೆತ್ತಡ್ಕ ಸುಬುಲು ಸಲಾಂ ಮದ್ರಸದ ಸಮಸ್ತ ಕೇರಳ ಸುನ್ನಿ ಬಾಲವೇದಿ (ಯಸ್.ಕೆ.ಎಸ್.ಬಿ.ವಿ.) ಇದರ ಅಧ್ಯಕ್ಷರಾಗಿ ಶಮಾಮ್ ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್, ಕೋಶಾಧಿಕಾರಿಯಾಗಿ ಫವಾಝ್ ಆಯ್ಕೆಯಾಗಿದ್ದಾರೆ.
ಮದ್ರಸದ ಸದರ್ ಮುಅಲ್ಲಿಂ ಮಹಮ್ಮದ್ ಆಲಿ ಉಸ್ತಾದ್, ಮದ್ರಸ ಅಧ್ಯಕ್ಷ ನಝೀರ್ ಎನ್ಮಾಡಿ, ಕಾರ್ಯದರ್ಶಿ ಇಬ್ರಾಹಿಂ, ಮುನೀರ್ ಉಪಸ್ಥಿತಿಯಲ್ಲಿ ನಡೆದ
ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಹಲ್ ಅಬೂಬಕ್ಕರ್ ಬಾರಿಸ್, ಅಝೀಂ, ಸಫೀರ್, ಶೈಮ್, ಶಾಹಿದ್, ಶಾಹಿಕ್, ಸಮ್ಮಾಸ್, ನಾಹಿದ್, ಸಹೀರ್ ಇವರುಗಳನ್ನು ಆಯ್ಕೆ ಮಾಡಲಾಯಿತು.