ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯ ನರಿಮೊಗರು-ಪೇರಡ್ಕ ರಸ್ತೆಗೆ 2 ವರ್ಷದಲ್ಲಿ ಸುಮಾರು 1 ಕೋಟಿ 20 ಲಕ್ಷ ಅನುದಾನ ನೀಡಿದ ಶಾಸಕ ಸಂಜೀವ ಮಠಂದೂರುರವರನ್ನು ನರಿಮೊಗರು,ಶಾಂತಿಗೋಡು ಗ್ರಾಮದ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರಿಂದ ಅಭಿನಂದನಾ ಕಾರ್ಯಕ್ರಮ ಶಾಂತಿಗೋಡು ಪೇರಡ್ಕದಲ್ಲಿ ನಡೆಯಿತು.
ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ತಾ.ಪಂ ಮಾಜಿ ಸದಸ್ಯರಾದ ಮಿನಾಕ್ಷಿ ಮಂಜುನಾಥ್, ಯಶೋಧ ಕೆ, ಪಂಚಾಯತ್ ಸದಸ್ಯರಾದ ಪುರಂದರ ಬಂಗೇರ, ಶ್ಯಾಮ್ ಭಟ್, ಬಿಜೆಪಿ ಶಾಂತಿಗೋಡು ಬೂತ್ ಅಧ್ಯಕ್ಷ ಕೃಷ್ಣ ಎಸ್, ಸಾಲಿಯಾನ್,ಯುವ ಮೋರ್ಚಾಧ ವಿನೋದ್ ಸುವರ್ಣ, ಹಿರಿಯರಾದ ದೇವಪ್ಪ, ಚಂದ್ರಶೇಖರ ದರ್ಖಾಸು ಸ್ಥಳೀಯರಾದ ಪರೀಕ್ಷಿತ್ ತೋಳ್ಪಾಡಿ, ನಿರಂಜನ್ ಭಟ್, ಗಣೇಶ್ ಪೇರಡ್ಕ, ಜಗದೀಶ್, ರಾಘವ, ಯೋಗಿಶ್ ಪೂಜಾರಿ ಉಪಸ್ಥಿತರಿದ್ದರು.