ಪುತ್ತೂರು: ಕಬಕ ಗ್ರಾ.ಪಂ ಪೋಳ್ಯ ಸಮೀಪದ ಕೆದುವಡ್ಕ ಎಂಬಲ್ಲಿ ಚಲಿಸುತ್ತಿದ್ದ ಮಾರುತಿ ಝೆನ್ ಎಸ್ತಿಲೊ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಜು.11 ರಂದು ನಡೆದಿದೆ. ಘಟನೆಯಿಂದ ಕಾರು ಭಾಗಶ್ಹ ಸುಟ್ಟು ಹೋಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ.
ಕೆದುವಡ್ಕ ಸಬ್ಬಣಕೋಡಿ ನಿವಾಸಿ ಗೀತಾ ಭಟ್ ಎಂಬವರಿಗೆ ಸೇರಿದ ಕಾರಿಗೆ ಬೆಂಕಿ ತಗಲಿದ್ದು, ಬೆಂಕಿಯನ್ನು ಅಗ್ನಿಶಾಮಕದಳದವರು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.