ಪುತ್ತೂರು: ಯಂಗ್ ಬ್ರಿಗೇಡ್ ಪುತ್ತೂರು ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಪುತ್ತೂರು ದರ್ಬೆಯಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಬಕ್ರೀದ್ ಹಬ್ಬ ಆಚರಿಸಲಾಯಿತು. ಯಂಗ್ ಬ್ರಿಗೇಡ್ ವತಿಯಿಂದ ಒಂದು ಹೊತ್ತಿನ ಉಪಹಾರ ವ್ಯವಸ್ಥೆ ಮಾಡಲಾಯಿತು. ಪುತ್ತೂರು ನಗರಸಭೆ ಸದಸ್ಯ ರಿಯಾಝ್ ಪರ್ಲಡ್ಕರವರು ತಮ್ಮ ಒಂದು ತಿಂಗಳ ಗೌರವಧನವನ್ನು ನೀಡಿ ಸಹಕರಿಸಿದರು. ಮುಖಂಡರಾದ ಶರೀಫ್ ಬಲ್ನಾಡ್, ಬಾತೀಷ್ ಅಳಕೆಮಜಲು,ಶಕೀಲ್ ದರ್ಬೆ, ಸನದ್ ಯೂಸುಫ್ , ರಶೀದ್ ಅಮ್ಚಿನಡ್ಕ , ಬಾತೀಷ್ ಬಲ್ನಾಡ್, ಉನೈಸ್ ಗಡಿಯಾರ್ ಉಪಸ್ಥಿತರಿದ್ದರು.