ಸೇಡಿಯಾಪು ಹನುಮಾಜೆಯಲ್ಲಿ ಗುಡ್ಡ ಕುಸಿದು ನಿರ್ಮಾಣ ಹಂತದ ಮನೆಗೆ ಹಾನಿ

0

 

ಪುತ್ತೂರು: ಧಾರಾಕಾರ ಮಳೆಗೆ ಬನ್ನೂರು ಗ್ರಾ.ಪಂ ವ್ಯಾಪ್ತಿಯ ಸೇಡಿಯಾಪು ಸಮೀಪ ಹನುಮಾಜೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದು ನಿರ್ಮಾಣ ಹಂತದ ಮನೆಗೆ ಹಾನಿಯಾಗಿದೆ.

ಸೇಡಿಯಾಪು ಹನುಮಾಜೆಯಲ್ಲಿ ರಾಮ ಭಟ್ ಎಂಬವರು ಜಾಗ ಖರೀದಿಸಿ ಮನೆ ನಿರ್ಮಾಣ ಮಾಡಿದ್ದರು. ಮನೆ ಮಾಡಿನ ಕೆಲಸ ಪೂರ್ಣಗೊಂಡಿದ್ದು ಜು.11 ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ. ಗುಡ್ಡ ಮತ್ತಷ್ಟು‌ ಕುಸಿಯುತ್ತಿದ್ದು ಇದರ ಪರಿಣಾಮ ಮಳೆಯ ನೀರು,‌ಮಣ್ಣು ಕೊಚ್ಚಿಕೊಂಡು ಹೋಗುತ್ತಿದ್ದು ಕೆಲ ಭಾಗದಲ್ಲಿರುವ ಮನೆಗಳಿಗೆ ಹಾನಿಯುಂಟು ಮಾಡುತ್ತಿದೆ. ಇದರಿಂದಾಗಿ ಕೆಲ ಭಾಗದಲ್ಲಿರುವ ಮನೆಗಳ ನಿವಾಸಿಗಳು ಭೀತಿಯಲ್ಲಿದ್ದಾರೆ. ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಏಕ ಪಿಡಿಓ ಚಿತ್ರಾವತಿ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here