ಪುತ್ತೂರು: ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ರಥದ ಶಿಲ್ಪಿಗಳಿಗೆ ಶ್ರೀ ದೇವರ ಸನ್ನಿಽಯಲ್ಲಿ ವೀಳ್ಯ ನೀಡುವ ಮೂಲಕ ಶುಭಾರಂಭ ಮಾಡಲಾಯಿತು. 11ಅಡಿ 8 ಇಂಚು ಎತ್ತರದ ಪುಷ್ಪರಥವನ್ನು ಮೂಡುಬಿದಿರೆಯ ಶಿಲ್ಪಿಗಳಾದ ಹರೀಶ್ ಆಚಾರ್ಯರು ನಿರ್ಮಿಸಲಿದ್ದಾರೆ.
ದಾರು ಶಿಲ್ಪಗಳಿಂದ ಕಂಗೊಳಿಸುವ ರಥ ನಿರ್ಮಾಣ ಕಾರ್ಯವನ್ನು ಅತಿ ಶೀಘ್ರವಾಗಿ ಪೂರೈಸಿ ಮುಂದಿನ ಜಾತ್ರಾ ಮಹೋತ್ಸವದ ಮುಂಚಿತವಾಗಿ ನಮ್ಮೆಲ್ಲರ ಆರಾಧ್ಯ ಮೂರ್ತಿ ಶ್ರೀ ಷಣ್ಮುಖದೇವರಿಗೆ ಸಮರ್ಪಿಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೇಮಿರಾಜ ಪಾಂಬಾರು ತಿಳಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಉತ್ಸವ ಸಮಿತಿಯ ಅಧ್ಯಕ್ಷರು, ಅರ್ಚಕರು ಮತ್ತು ಗಣ್ಯರು ಉಪಸ್ಥಿತರಿದ್ದರು.