ಕೆಯ್ಯೂರು : ಶ್ರೀ ಮಹಿಷ ಮರ್ದಿನಿ ದುರ್ಗಾ ಪರಮೇಶ್ವರಿ ದೇವಾಸ್ಥಾನ ಕೆಯ್ಯೂರಿನಲ್ಲಿ ಅ2ರಂದು ಬೆಳಿಗ್ಗೆ 11ಗಂಟೆಗೆ ನಾಗರ ಪಂಚಮಿ ಉತ್ಸವ ನಡೆಯಿತು. ದೇವಸ್ಥಾನದ ನಾಗ ಪ್ರತಿಷ್ಠೆ ಮಂಟಪದ ಬಳಿ ಇರುವ ನಾಗನ ಮೂರ್ತಿಗೆ ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ರಾವ್, ಹಿಂಗಾರ, ಹಾಲು, ಬೆಲ್ಲ, ಸೀಯಾಳ,ಜೇನುತುಪ್ಪ, ಸಕ್ಕರೆ, ಅಭಿಷೇಕ ಮಾಡಿ ಹೂವುಗಳಿಂದ ಶೃಂಗರಿಸಿ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ, ಸದಸ್ಯರುಗಳು, ಭಕ್ತಾಧಿಗಳು, ಉತ್ಸವದಲ್ಲಿ ಉಪಸ್ಥಿತರಿದ್ದರು.