ಕಡಬ: ಕುಟ್ರುಪಾಡಿ ಗ್ರಾ.ಪಂ.ವತಿಯಿಂದ ನಡೆದ ಸ್ವಾತಂತ್ರ್ಯ ಮಹೋತ್ಸದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಕುಸಿದು ಬಿದ್ದು ಮೃತಪಟ್ಟ ನಿವೃತ್ತ ಯೋಧ ಗಂಗಾಧರ ಗೌಡ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಕಡಬ ಪೇಟೆಯಲ್ಲಿ ನಡೆಯಿತು. ಪಾರ್ಥೀವ ಶರೀರವನ್ನು ಕಡಬದಿಂದ ಮೆರವಣಿಗೆಯ ಮೂಲಕ ಮೃತರ ಮನೆಗೆ ಕೊಂಡೊಯ್ಯಲಾಯಿತು.
ಕಂಬನಿ ಮಿಡಿದ ಕಡಬದ ಜನತೆ:
ಧ್ವಜಾರೋಹಣದ ವೇಳೆ ಕುಸಿದು ಬಿದ್ದು ಮೃತಪಟ್ಟ ನಿವೃತ್ತ ಯೋಧರ ಸಾವಿನ ಬಗ್ಗೆ ಕಡಬದ ಜನತೆ ಕಂಬನಿ ಮೀಡಿದ್ದಾರೆ. ಅಂತಿಮ ದರ್ಶನದ ವೇಳೆ ನೆರೆದ ಸಾರ್ವಜನಿಕರು ಕಣ್ಣೀರು ಸುರಿಸಿದ್ದಾರೆ. ಸೌಮ್ಯ ಸ್ವಭಾವದ ಗಂಗಾಧರ ಗೌಡರ ಸಾವು ಗ್ರಾಮದ ಜನತೆಯ ನೋವಿಗೆ ಕಾರಣವಾಗಿದೆ.
ನಿವೃತ್ತ ಸೈನಿಕರಿಂದ ಗೌರವಾರ್ಪಣೆ:
ಮೃತ ಯೋಧನ ಪಾರರ್ಥೀವ ಶರೀರ ಪುತ್ತೂರು ಆಸ್ಪತ್ರೆಯಿಂದ ಕಡಬ ತಲುಪಿದಾಗ ಕಡಬ ಎ.ಪಿ.ಎಂ.ಸಿ ಪ್ರಾಂಗಣದ ಬಳಿ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಯಿತು. ಪ್ರಥಮವಾಗಿ ನಿವೃತ್ತ ಸೈನಿಕರಿಂದ ಸೇನೆಯ ಶಿಷ್ಟಚಾರದಂತೆ ಗೌರವ ಸಲ್ಲಿಸಲಾಯಿತು.
ಕುಟ್ರುಪಾಡಿ: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಮೃತ್ಯು!