ಕಾವು ಔಷಧಿಗೆ ತೆರಳಿದ್ದ ಮಹಿಳೆ ನಾಪತ್ತೆ

0

ಪುತ್ತೂರು: ಔಷಧಿ ತರುವುದಾಗಿ ಹೇಳಿ ತೆರಳಿದ್ದ ನಾಪತ್ತೆಯಾಗಿರುವ ಘಟನೆ ಡಿ.24ರಂದು ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ನಡೆದಿದೆ.


ಮಾಡ್ನೂರು ಕಾವು ಪೆರ್ಗುಡೆಕುಮೇರು ಅಬ್ದುಲ್ ರಹಮಾನ್ ಎಂಬರ ಪತ್ನಿ ಜಮೀಳಾ(46ವ.) ನಾಪತ್ತೆಯಾದವರು. ಡಿ.24 ರಂದು ಬೆಳಿಗ್ಗೆ ಮನೆಯಿಲ್ಲಿದ್ದ ಅವರು ಕೌಡಿಚ್ಚಾರ್ ಗೆ ಔಷಧಿ ತರಲು ಹೋಗುವುದಾಗಿ ತೆರಳಿದ್ದ ಅವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಪತಿ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here