ಎ.6: ಅನಂತಾಡಿ ಚಿತ್ತರಿಗೆಯಲ್ಲಿ ಧರ್ಮಮೆಚ್ಚಿ ಜಾತ್ರೆ

0

ವಿಟ್ಲ: ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಚಿತ್ತರಿಗೆಯಲ್ಲಿ ಎ.5 ರಂದು ರಾತ್ರಿ ಭಂಡಾರ ತೆಗೆದು ಎ.6 ರಂದು ಧರ್ಮ ಮೆಚ್ಚಿ ಜಾತ್ರೆ ನಡೆಯಲಿದೆ. ಆ ಪ್ರಯುಕ್ತ ಎ.4ರಂದು ಸಾಂಯಂಕಾಲ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಗೊಳ್ಳಲಿದೆ.

ಎ.5ರಂದು ರಾತ್ರಿ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ, ರಾತ್ರಿ 7 ಗಂಟೆಯಿಂದ ಪುತ್ತೂರಿನ ಗಾನಸಿರಿ ಕೇಂದ್ರ ಪ್ರಸ್ತುತಪಡಿಸುವ ಗಾನಸಿರಿ ಭಜನ್ ಸಂಧ್ಯಾ ನಡೆಯಲಿದೆ. ಎ.6 ರಂದು ಬೆಳಗ್ಗೆ 12 ವರ್ಷಗಳಿಗೊಮ್ಮೆ ನಡೆಯುವ ಧರ್ಮ ಮೆಚ್ಚಿ ಜಾತ್ರೆ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ನರೇಂದ್ರ ರೈ ನೆಲ್ತೊಟ್ಟುಮನೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here