ರೆಸ್ಕ್ಯೂ ಇಂಡಿಯಾ ರಾಷ್ಟ್ರಮಟ್ಟದ 18ನೇ ಜೀವರಕ್ಷಕ ಈಜು ಪಂದ್ಯಾಟ- ಲಿಖಿತ್ ರಾಮಚಂದ್ರ 4 ಚಿನ್ನ, 1 ಬೆಳ್ಳಿ ಪದಕ ಪಡೆದು ಸಾಧನೆ

0

ಪುತ್ತೂರು: ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ರೇ-ಸೆಂಟರ್ ಈಜುಕೊಳದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಭಾರಿಗೆ ನಡೆದ “ರೆಸ್ಕ್ಯೂ ಇಂಡಿಯಾ-2023” ಹೆಸರಿನಲ್ಲಿ ನಡೆದ ರಾಷ್ಟ್ರಮಟ್ಟದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಪಂದ್ಯಾಟದಲ್ಲಿ ಲಿಖಿತ್ ರಾಮಚಂದ್ರ ಭಾಗವಹಿಸಿ 4 ಚಿನ್ನ ಮತ್ತು 1 ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.


ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ 7 ನೇ ತರಗತಿ ವಿದ್ಯಾರ್ಥಿಯಾಗಿರುವ ಇಲ್ಲಿನ ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದ ಈಜುಕೊಳದಲ್ಲಿ ಖ್ಯಾತ ಈಜು ತರಬೇತುದಾರರಾದ ಪಾರ್ಥ ವಾರಣಾಸಿಯವರ ನಿರ್ದೇಶನದಲ್ಲಿ ಜೀವ ರಕ್ಷಕ ಈಜು ತರಬೇತುದಾರರಾದ ರೊಹಿತ್‌ರವರಿಂದ ಜೀವರಕ್ಷಕ ಈಜು ಮತ್ತು ದೀಕ್ಷಿತ್ ಇವರಿಂದ ಕಳೆದ 8 ವರ್ಷಗಳಿಂದ ಈಜು ತರಬೇತಿ ಪಡೆಯುತ್ತಿದ್ದಾರೆ.


ಇವರು ವೈಯುಕ್ತಿಕ ಪಂದ್ಯಾಟಗಳಾದ 100ಮೀ ಟೊ ವಿಥ್ ಫಿನ್ಸ್‌ನಲ್ಲಿ ಚಿನ್ನದ ಪದಕ, 50ಮೀ ಮ್ಯಾನಿಕನ್ ಕ್ಯಾರಿನಲ್ಲಿ ಚಿನ್ನದ ಪದಕ, 50ಮೀ ಫ್ರೀ ಸ್ಟೈಲ್ ವಿಥ್ ಫಿನ್ಸ್‌ನಲ್ಲಿ ಬೆಳ್ಳಿ ಪದಕ, ಕರ್ನಾಟಕ ಟೀಮ್‌ನಲ್ಲಿ 450 ಮೀ ಮೆಡ್ಲೆ ರಿಲೇ ಯಲ್ಲಿ ಚಿನ್ನದ ಪದಕ, 450 ಮೀ ಮಿಕ್ಸೆಡ್ ರಿಲೇಯಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಇವರು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರ್ರಾಮಚಂದ್ರ ಎ. ಮತ್ತು ದರ್ಬೆ ದೀಪ ಬ್ಯೂಟಿಪಾರ್ಲರ್ ಮ್ಹಾಲಕಿ ದೀಪ ದಂಪತಿ ಪುತ್ರ.


ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ ಒಫ್ ಇಂಡಿಯಾ ಮತ್ತು ಇಂಟರ್ನ್ಯಾಷನಲ್ ಲೈಫ್ ಸೇವಿಂಗ್ ವತಿಯಿಂದ ಆಯೋಜಿಸಲಾಗಿದ್ದು ಇಟಲಿಯ ಜೀವರಕ್ಷಕ ಈಜು ತರಬೇತುದಾರರಾದ ಲೊರೆಂಝೋ ಬರೇಲಿ ಇವರು ಮುಖ್ಯ ತೀರ್ಪುಗಾರರಾಗಿದ್ದರು. ಪುತ್ತೂರು ಅಕ್ವಾಟಿಕ್ ಕ್ಲಬ್ ನ ಜೀವರಕ್ಷಕ ಈಜು ತರಬೇತುದಾರರಾದ ರೋಹಿತ್ ಪಿ ಈ ಪಂದ್ಯಾಟದಲ್ಲಿ ತೀರ್ಪುಗಾರರಾಗಿದ್ದರು.

LEAVE A REPLY

Please enter your comment!
Please enter your name here