![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಆಲಂತಾಯ ನಿವಾಸಿ ಕರಿಯ ಅವರಿಗೆ ಚಿಕಿತ್ಸೆಗಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 20 ಸಾವಿರ ರೂ., ಧನಸಹಾಯದ ಮಂಜೂರುಪತ್ರವನ್ನು ಹಸ್ತಾಂತರಿಸಲಾಯಿತು.
ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ, ವಲಯ ಜನಜಾಗೃತಿ ವೇದಿಕೆಯ ನಿಟಕಪೂರ್ವ ಅಧ್ಯಕ್ಷ ವೇದಕುಮಾರ್, ಗೋಳಿತ್ತೊಟ್ಟು ಶೌರ್ಯವಿಪತ್ತು ಘಟಕದ ಪ್ರತಿನಿಧಿ ಮಹೇಶ್ ಪಿ., ವಲಯದ ಮೇಲ್ವಿಚಾರಕಿ ಸುಜಾತ, ಆಲಂತಾಯ ಒಕ್ಕೂಟದ ಅಧ್ಯಕ್ಷ ಅಶೋಕ ಸಿ.ಬಿ., ನವಜೀವನ ಸಮಿತಿ ಸದಸ್ಯ ಅಚ್ಚುತ ನಾಯ್ಕ್, ಸುಂದರ ಮುಗೇರ, ಗೋಳಿತ್ತೊಟ್ಟು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ನೇಮಿರಾಜ ಎಸ್.ಬಿ., ಆಲಂತಾಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹೇಮಲತಾ, ಶೌರ್ಯವಿಪತ್ತು ತಂಡದ ಸದಸ್ಯ ಮನೋಹರ ಜೈನ್ ಉಪಸ್ಥಿತರಿದ್ದರು.