ಬಡಗನ್ನೂರುಃ ಆನೆಕಾಲು ತಪಾಸಣಾ ನಡುರಾತ್ರಿ ಶಿಬಿರ

0

ಬಡಗನ್ನೂರುಃ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆನೆ ಕಾಲು ತಪಾಸಣಾ ರಾತ್ರಿ ಶಿಬಿರ ಬಡಗನ್ನೂರು ಸ.ಉ.ಹಿ.ಪ್ರಾ.ಶಾಲಾ ಆವರಣದಲ್ಲಿ ಡಿ. 13 ರಂದು ನಡೆಯಿತು.ಕಾರ್ಯಕ್ರಮಕ್ಕೆ ಬೀದಿ ನಾಟಕ ಮುಖಾಂತರ ಚಾಲನೆ ನೀಡಲಾಯಿತು. ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿಕಿಲ್ ಆನೆ ಕಾಲು ರೋಗದ ಬಗ್ಗೆ ಮಾಹಿತಿ ನೀಡಿದರು.

ಸುಮಾರು 100 ಕ್ಕೂ ಹೆಚ್ಚು  ಮಂದಿ ಆಗಮಿಸಿ ರಕ್ತ ಪರೀಕ್ಷೆ,  ಬಿ.ಪಿ, ಹಾಗೂ ಸುಗರ್ ತಪಾಸಣೆ ಮಾಡಿಕೊಂಡು ಆರೋಗ್ಯ ಇಲಾಖೆಯ ಸೌಲಭ್ಯವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಉದಯ ಕುಮಾರ್ ಪಡುಮಲೆ, ಆನಂದ ಆನಂದ ಪಾಟಾಳಿ,ಶ್ರೀಧರ ನಾಯಕ್,  ಸಮುದಾಯ ಅರೋಗ್ಯ ಅಧಿಕಾರಿ ಪ್ರಜ್ಞಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ನಂದಿನಿ ಕೆ,ಹಾಗೂ ವನಿತಾ, ಪಡುವನ್ನೂರು ಉಪಕೇಂದ್ರದ ಸಿ.ಹೆಚ್.ಒ ದಿವ್ಯಶ್ರೀ, ಲ್ಯಾಬ್ ಟೆಕ್ನಿಷಿಯನ್ ಉಷಾ, ಸಿಬಂದಿಗಳಾದ ವಾಸು, ಶೀಲಾವತಿ, ಆಶಾ ಕಾರ್ಯಕರ್ತೆಯಾದ ಸುಜಾತ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here