ನಿಡ್ಪಳ್ಳಿ; ಯೋಜನೆಯ ಒಕ್ಕೂಟದ ತ್ರೈಮಾಸಿಕ ಸಭೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಡಿ.17 ರಂದು ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ.ಬಿ ಇವರ ಅಧ್ಯಕ್ಷತೆಯಲ್ಲಿ ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.

ಸೇವಾ ಪ್ರತಿನಿಧಿ ಶಾಲಿನಿ.ಕೆ ಯೋಜನೆಯ ಮಾಹಿತಿ ನೀಡಿ ಸದಸ್ಯರು ತೆಗೆದ ಸಾಲವನ್ನು ಆಯಾ ಉದ್ದೇಶಕ್ಕೆ ಉಪಯೋಗಿಸಿಕೊಂಡು ಅಭಿವೃದ್ಧಿ ಹೊಂದುವ ಮುಖಾಂತರ ಪ್ರತಿ ವಾರ ಕಂತು ಬಾಕಿಯಾಗದಂತೆ ಮರುಪಾವತಿ ಮಾಡುವ ಬಗ್ಗೆ ತಿಳಿಸಿದರು.ವರ್ಷಂಪ್ರತಿ ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಸುವ ಬಗ್ಗೆ ಚರ್ಚಿಸಿ ಕಳೆದ ವರ್ಷದ ಪೂಜಾ ಸಮಿತಿಯಿಂದ ನಡೆಸಲು ನಿರ್ಣಯಿಸಲಾಯಿತು.ಜತೆ ಕಾರ್ಯದರ್ಶಿ ಹೇಮಾ ಸಿ.ಎಚ್ ಒಕ್ಕೂಟದ ವರದಿ ವಾಚಿಸಿದರು.ಸಂಘದ ಹಾಜರಾತಿ, ಗ್ರೇಡಿಂಗ್ ನಡೆಸಲಾಯಿತು.ಬಂದ ಸಾಲದ ಅರ್ಜಿಗಳನ್ನು ಪರಿಶೀಲಿಸಲಾಯಿತು..ಒಕ್ಕೂಟದ ಉಪಾಧ್ಯಕ್ಷ ಸತೀಶ್. ಎಂ, ಕೋಶಾಧಿಕಾರಿ ತಿಮ್ಮಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಆಚಾರ್ಯ ಸ್ವಾಗತಿಸಿ,ಮಾಯಿಲ.ಕೆ ವಂದಿಸಿದರು.

LEAVE A REPLY

Please enter your comment!
Please enter your name here